

ಬಂದಾರು-ಕುಪ್ಪೆಟ್ಟಿ ಮುಖ್ಯ ರಸ್ತೆಯ ಪದ್ಮುಂಜ ಬಳಿ ಬೈಕ್ ಅಪಘಾತಕ್ಕೊಳಗಾಗಿ ರಸ್ತೆಯಲ್ಲಿ ಬಿದ್ದು ನರಳಾಡುತ್ತಿದ್ದ ಯುವಕನನ್ನು, ಅದೇ ದಾರಿಯಲ್ಲಿ ಬೆಳಾಲು ಆರಿಕೋಡಿ ದೇವಸ್ಥಾನ ಕಾರ್ಯಕ್ರಮ ಮುಗಿಸಿ ಬೇರೊಂದು ಕಾರ್ಯಕ್ರಮಕ್ಕೆ ತೆರಳುವ ಸಂದರ್ಭದಲ್ಲಿ ಬಂದ ಶಾಸಕ ಹರೀಶ್ ಪೂಂಜಾ ಅವರು ರಸ್ತೆಯಲ್ಲಿ ಬಿದ್ದಿದ್ದ ಯುವಕನನ್ನು ಕಂಡು ಕೂಡಲೇ ಆಸ್ಪತ್ರೆಗೆ ತಲುಪಿಸುವಲ್ಲಿ ಸಹಾಯ ಮಾಡಿರುವ ಘಟನೆ ನಡೆದಿದೆ.
ಅಪಘಾತಕ್ಕೀಡಾಗಿರುವ ವ್ಯಕ್ತಿಯ ತುರ್ತು ಚಿಕಿತ್ಸೆಗೆ ಸ್ಪಂದನೆ ಮಾಡಿದ ಹರೀಶ್ ಪೂಂಜಾರ ಮಾನವೀಯತೆಯನ್ನು ಜನರು ಕೊಂಡಾಡಿದ್ದಾರೆ.













