Home latest Chikkamaglur : 6 ಮರಿ ಹಾಕಿದ ದೇವರಿಗೆ ಕಡಿಯಲು ತಂದ ಕುರಿ – ರೈತನಿಗೆ ಹೊಡೀತು...

Chikkamaglur : 6 ಮರಿ ಹಾಕಿದ ದೇವರಿಗೆ ಕಡಿಯಲು ತಂದ ಕುರಿ – ರೈತನಿಗೆ ಹೊಡೀತು ಬಂಪರ್ ಲಾಟ್ರಿ !!

Hindu neighbor gifts plot of land

Hindu neighbour gifts land to Muslim journalist

Chikkamaglur : ಕೆಲವು ಪ್ರದೇಶಗಳಲ್ಲಿ ಜಾತ್ರೆ ಅಥವಾ ಹಬ್ಬ ಹರಿದಿನಗಳ ಸಂದರ್ಭದಲ್ಲಿ ದೇವರಿಗೆ ಕುರಿ ಕೋಳಿಯನ್ನು ಬಲಿಕೊಡುವ ಸಂಪ್ರದಾಯವಿದೆ. ಹಬ್ಬ ಜಾತ್ರೆಗಳು ಹತ್ತಿರವಾದಾಗ ಗ್ರಾಮಸ್ಥರು ಕುರಿಯನ್ನು ಕೊಂಡು, ಅವುಗಳನ್ನು ತಮ್ಮ ಮನೆಯಲ್ಲಿ ಸಾಕಿ ಪುಷ್ಟಪುಷ್ಟವಾಗಿ ಬೆಳೆಸುತ್ತಾರೆ. ನಂತರ ಚೆನ್ನಾಗಿ ಕೊಬ್ಬಿದಾಗ ಅವುಗಳನ್ನು ದೇವರಿಗೆ ಬಲಿ ಕೊಡುತ್ತಾರೆ. 

ಹೀಗೆ ಚಿಕ್ಕಮಗಳೂರಿನ ಚಂದ್ರಕಟ್ಟೆ ಎಂಬಲ್ಲಿ ಸಂತೋಷ್ ಎಂಬ ಯುವ ರೈತನೊಬ್ಬ ದೇವರಿಗೆ ಕಡಿಯಲು ಕುರಿ ಒಂದನ್ನು ಕೊಂಡು ತಂದಿದ್ದಾನೆ. ಆದರೆ ಆ ದೇವರ ಇಚ್ಛೆಯು ಅಥವಾ ಆ ರೈತನ ಅದೃಷ್ಟ ಹೋಗುತ್ತಿಲ್ಲ ದೇವರಿಗೆ ಬಲಿ ಕೊಡಲು ತಂದ ಆ ಕುರಿಯೇ ಸುಮಾರು ಆರು ಮರಿಗಳಿಗೆ ಜನ್ಮವಿತ್ತು, ರೈತನಿಗೆ ಲಾಟರಿ ಹೊಡೆಯುವಂತೆ ಮಾಡಿದೆ.

ಯಸ್, ಸಂತೋಷ್ ಎಂಬವರು ಜಾತ್ರೆಯ ಅಂಗವಾಗಿ ಎರಡು ಕುರಿಗಳನ್ನು ಕಡಿಯಲು ತಂದಿದ್ದರು. ಈ ವೇಳೆ ಒಂದು ಆಡನ್ನು ಕಡಿದರು, ಇನ್ನೊಂದು ಆಡು ಗರ್ಭಿಣಿಯಾಗಿರಬಹುದು ಎಂಬ ಅನುಮಾನದಿಂದ ಅದನ್ನು ಕಡಿಯದೆ ಹಾಗೆ ಉಳಿಸಿಕೊಂಡಿದ್ದರು. ರೈತನ ಈ ನಿರ್ಧಾರವೇ ಇದೀಗ ಅವನ ಪಾಲಿಗೆ ವರವಾಗಿ ಪರಿಣಮಿಸಿದೆ. ಕಾರಣ ಇಂದು ಬೆಳಗ್ಗೆ ಆ ಆಡು ಒಂದೇ ಸಮಯದಲ್ಲಿ ಆರು ಮರಿಗಳಿಗೆ ಜನ್ಮ ನೀಡಿದೆ.

ಅಪರೂಪವಾಗಿ ಕಂಡುಬರುವ ಈ ಘಟನೆಗೆ ಸಾಕ್ಷಿಯಾದ ಆಡು ನಾಲ್ಕು ಹೆಣ್ಣು ಮತ್ತು ಎರಡು ಗಂಡು ಮರಿಗಳಿಗೆ ಜನ್ಮ ನೀಡಿದ್ದು, ಎಲ್ಲಾ ಆರು ಮರಿಗಳು ಸಂಪೂರ್ಣ ಆರೋಗ್ಯವಾಗಿವೆ. ಒಂದೇ ಆಡು ಏಕಕಾಲಕ್ಕೆ ಆರು ಮರಿಗಳನ್ನು ಹಾಕಿರುವ ಸುದ್ದಿ ತಿಳಿಯುತ್ತಿದ್ದಂತೆ, ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಕುತೂಹಲಿಗಳು ಆಡು ಮತ್ತು ಮರಿಗಳನ್ನು ನೋಡಲು ಚಂದ್ರಕಟ್ಟೆಗೆ ಭೇಟಿ ನೀಡುತ್ತಿದ್ದಾರೆ