

ಉಜಿರೆ: ಉಜಿರೆ ಗ್ರಾ.ಪಂ.ವ್ಯಾಪ್ತಿಯ ವಾರ್ಡ್ 5 ಅಜಿತನಗರ ವಾರ್ಡ್ ಸಭೆಯು ಜ 30ರಂದು ಅಪರಾಹ್ನ ಅಜಿತನಗರ ಅಂಗನವಾಡಿಯಲ್ಲಿ ಗ್ರಾ.ಪಂ.ಸದಸ್ಯ ನಾಗರಾಜ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಗ್ರಾ ಪಂ. ಕುಡಿಯುವ ನೀರಿನ ಬಿಲ್ ಹೆಚ್ಚಳದ ಕುರಿತು ಗ್ರಾಮಸ್ಥರು ಪಂಚಾಯತ್ ಗೆ ಮನವಿ ಮಾಡಿಕೊಂಡರು. ಅಜಿತನಗರ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣದಬಗೆಗೆ ಬೇಡಿಕೆ ಸಲ್ಲಿಸಿದರು. ಸರಕಾರದ ಗ್ರಾಂಟ್ ಬಂದರೆ ಮಾಡಬಹುದು ಎಂದು ಕಾರ್ಯದರ್ಶಿಯವರು ಉತ್ತರಿಸಿದರು.
ಅಜಿತನಗರ ಅಂಗನವಾಡಿ ಕೇಂದ್ರಕ್ಕೆ ನೀರಿನ ಟ್ಯಾಂಕ್ ಅಗತ್ಯವಿರುವುದಾಗಿ ಕಾರ್ಯಕರ್ತೆ ಬೇಡಿಕೆ ಸಲ್ಲಿಸಿದರು. ಲಲಿತನಗರದಲ್ಲಿ ಒಂದು ಬೀದಿ ದೀಪದ ಅವಶ್ಯಕತೆಯಿದೆ. ಕಳೆದ 3 ವರ್ಷಗಳಿಂದ 200 ಮೀಟರ್ ರಸ್ತೆ ಕಾಂಕ್ರಿಟೀಕರಣದ ಅಗತ್ಯ ಬೇಡಿಕೆಯನ್ನು ಸರಕಾರದ ಅನುದಾನ ಲಭ್ಯವಿಲ್ಲದೆ ಬಾಕಿಯುಳಿದಿದ್ದು, ಪಿ.ಡಿ.ಓ ಹಾಗೂ ಗುತ್ತಿಗೆದಾರರ ಭರವಸೆಯ ಮೇರೆಗೆ ಸ್ಥಳೀಯ ಲಲಿತನಗರ ವಾರ್ಡಿನ 6 ಮಂದಿ ನಿವಾಸಿಗಳು ರಸ್ತೆ ಕಾಂಕ್ರಿಟೀಕರಣದ ಮೆಟೀರಿಯಲ್ ಒದಗಿಸುವ ಬಾಬು ತಲಾ ರೂ 42 ಸಾವಿರದಂತೆ ಒಟ್ಟು ರೂ 2.52 ಲಕ್ಷ ಮೊತ್ತವನ್ನು ಸಂಗ್ರಹಿಸಿ ಕೊಟ್ಟಿದ್ದು ರಸ್ತೆ ಕಾಂಕ್ರಿಟೀಕರಣಗೊಳಿಸಲಾಗಿದೆ ಎಂದು ಶ್ರೀನಿವಾಸ ತಂತ್ರಿ ಗ್ರಾ.ಪಂ. ಗಮನಕ್ಕೆ ತಂದು ಸರಕಾರದ ಅನುದಾನ ಬಂದ ಬಳಿಕ ಮೊತ್ತವನ್ನು ಮರಳಿಸಬೇಕಾಗಿದೆ ಎಂದು ಸಭೆಯ ಮುಂದೆ ತಿಳಿಸಿದರು.
ಸದಸ್ಯರಾದ ಪುಷ್ಪಾವತಿ ಆರ್ ಶೆಟ್ಟಿ ಮತ್ತು ನಾಗೇಶ್ ರಾವ್,ಗ್ರಾ.ಪಂ. ಸಿಬಂದಿ ನಾಗೇಶ್ ಉಪಸ್ಥಿತರಿದ್ದರು. ಗ್ರಾ.ಪಂ. ಕಾರ್ಯದರ್ಶಿ ಶ್ರವಣಕುಮಾರ್ ಸ್ವಾಗತಿಸಿ, ಕಲಾಪ ನಡೆಸಿಕೊಟ್ಟರು. ವಿಶ್ವನಾಥ ನಾಯ್ಕನಿರಂಜನ ಶೆಟ್ಟಿ, ಪ್ರಮೀಳಾ,ಶೋಭಾ,ಶ್ರೀನಿವಾಸ ತಂತ್ರಿ ಮತ್ತು ವಾರ್ಡ್ ಸದಸ್ಯರು ಭಾಗವಹಿಸಿ ತಮ್ಮಬೇಡಿಕೆ, ಸಮಸ್ಯೆಗಳನ್ನು ಸಭೆಯ ಮುಂದಿಟ್ಟರು.













