

Karanika: ಭಾರತ ಹುಣ್ಣಿಮೆಯ ಪ್ರಯುಕ್ತ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹರಪನಹಳ್ಳಿಯ ದೊಡ್ಡ ಮೈಲಾರದ ಮೈಲಾರಲಿಂಗೇಶ್ವರ ದೇವಾಲಯದಲ್ಲಿ ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿಯಾಯ್ತಲೇ ಪರಾಕ್ ಎಂದು ಗೊರವಪ್ಪ ಕಾರಣಿಕ ನುಡಿದಿದ್ದಾರೆ.
ಭರತ ಹುಣ್ಣಿಮೆ ಹಿನ್ನೆಲೆ ಪ್ರತಿ ವರ್ಷದಂತೆ ಈ ಬಾರಿಯೂ ಹರಪನಹಳ್ಳಿಯಲ್ಲಿ ಜಾತ್ರಾ ಮಹೋತ್ಸವ ನಡೆದಿದೆ. ಈ ವರ್ಷದ ಕಾರ್ಣಿಕವನ್ನು ಗೊರವಪ್ಪನವರು ಬಿಲ್ಲನ್ನೇರಿ ನಿಂತು, ಶೂನ್ಯವನ್ನು ದಿಟ್ಟಿಸುತ್ತಾ ನುಡಿ ಭಕ್ತರ ಜಯಘೋಷಗಳ ನಡುವೆ ಸದ್ದಲೇ ಪರಾಕ್ ಎಂದು ಹೇಳುವ ಮೂಲಕ ನುಡಿದರು.
ಈ ಬಾರಿ ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿಯಾಯ್ತಲೇ ಪರಾಕ್ ಎಂದು ಕಾರಣಿಕ ನುಡಿಯಲಾಗಿದ್ದು, ಈ ಬಾರಿ ಮಳೆ ಬೆಳೆಯಾಗಿ ರಾಜ್ಯದ ಜನ ಸಮೃದ್ಧಿಯಿಂದ ಇರುತ್ತಾರೆ ಎಂದು ಹೇಳಲಾಗಿದೆ.













