Home News Hassan: ಹಾಸನದಲ್ಲಿ ಯಶ್ ತಾಯಿ ಪುಷ್ಪ ಬೀದಿ ರಂಪ!!

Hassan: ಹಾಸನದಲ್ಲಿ ಯಶ್ ತಾಯಿ ಪುಷ್ಪ ಬೀದಿ ರಂಪ!!

Hindu neighbor gifts plot of land

Hindu neighbour gifts land to Muslim journalist

 

Hassan: ತಮ್ಮ ನೇರ ನಡೆ-ನುಡಿ, ಖಡಕ್ ಮಾತುಗಳಿಂದ ರಾಜ್ಯಾದ್ಯಂತ ಸುದ್ದಿಯಾಗುತ್ತಿರುವ ನಟ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪ ಅವರು ಜಮೀನು ವಿಚಾರವಾಗಿ ಹಾಸನದಲ್ಲಿ ಬೀದಿ ರಂಪಾಟ ನಡೆಸಿದ್ದಾರೆ. ಈ ಕುರಿತಾದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಯಸ್, ಹೊಸ ವರ್ಷದ ಆರಂಭದಲ್ಲಿ ಹಾಸನದ ವಿದ್ಯಾನಗರ ಬಡಾವಣೆಯಲ್ಲಿರುವ ಯಶ್ ಅವರ ಭವ್ಯವಾದ ಅರಮನೆ ವಿವಾದಕ್ಕೀಡಾಗಿತ್ತು. ಸುಮಾರು 1,500 ಅಡಿ ಜಾಗವನ್ನು ಯಶ್ ತಾಯಿ ಪುಷ್ಪ ಒತ್ತುವರಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ನ್ಯಾಯಾಲಯದ ಆದೇಶದಂತೆ ಮನೆಯ ಕಾಂಪೌಂಡ್‌ನ್ನು ಜೆಸಿಬಿ ಮೂಲಕ ತೆರವು ಮಾಡಲಾಗಿತ್ತು. ಆದರೆ ನಿನ್ನೆ (ಫೆಬ್ರವರಿ 1) ಕೆಡವಿದ್ದ ಕಾಂಪೌಂಡ್‌ನ್ನು ಯಶ್ ಅವರ ತಾಯಿ ಪುಷ್ಪಾ ಮತ್ತೆ ಕಟ್ಟಿಸುವ ಪ್ರಯತ್ನ ಮಾಡಿದ್ದಾರೆ. 

ಜಿಪಿಎ ಹೋಲ್ಡರ್‌ ದೇವರಾಜ್‌ ಹಾಕಿದ್ದ ತಂತಿಬೇಲಿಯನ್ನು ತೆರವು ಗೊಳಿಸಿ ಕಾಂಪೌಂಡ್ ನಿರ್ಮಾಣಕ್ಕೆ ಯಶ್ ತಾಯಿ ಮುಂದಾದಾಗ ದೇವರಾಜ್ ಅಲ್ಲಿ ಬಂದಿದ್ದು, ಅವರ ಬಳಿ ದಾಖಲೆ ಕೊಡಿ ಎಂದು ಪುಷ್ಪಾ ಅರುಣ್ ಕುಮಾರ್ ವಾಗ್ವಾದ ನಡೆಸಿದ್ದಾರೆ. ಅಲ್ಲದೆ ನ್ಯಾಯಾಲಯದ ಆದೇಶದಂತೆ ನಾವು ನಡೆದುಕೊಂಡಿದ್ದೇವೆ. ಜಡ್ಜ್ ನ ಇಲ್ಲೇ ಕರೆಸು ಇಲ್ಲೇ ತೀರ್ಮಾನ ಆಗಲಿ ಎಂದು ಕ್ಯಾಮರಾಗಳ ಮುಂದೆ ಬಿಲ್ಡಪ್ ತಗೊಳ್ಳೋಕೆ ಬಂದಿದೀಯಾ ಎಂದು ಗುಡುಗಿದ್ದಾರೆ. ನಿಮಗೆ ಒಂದು ಘನತೆ ಇದೆ ಅದನ್ನು ಹಾಳು ಮಾಡಿಕೊಳ್ಳಬೇಡಿ, ನಿಮ್ಮಿಂದ ಯಶ್ ಮರ್ಯಾದೆ ಹೋಗುತ್ತೆ ಎಂದು ಹೇಳಿದರೂ ಕೂಡ ಕೇಳದ ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಬಡಾವಣೆ ಪೊಲೀಸರ ಬಳಿಯೂ, ನೀವು ದೇವರಾಜ್ ಅವರನ್ನು ಏಕೆ ಬಂಧಿಸಿಲ್ಲ? ಎಂದು ಪ್ರಶ್ನೆ ಮಾಡಿದ್ದಾರೆ. ಜೆಸಿಬಿ ಯಾಕೆ ಸೀಜ್ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.

ಯಶ್ ತಾಯಿಯ ಈ ವರ್ತನೆಯಿಂದ ಬೇಸತ್ತ ಜಿಪಿಎ ಹೋಲ್ಡರ್ ದೇವರಾಜ್, ಅವರೇನು ಇಂಡಿಯನ್ ಪ್ರೆಸಿಡೆಂಟಾ..? ಎಂದು ಮಾಧ್ಯಮವದರ ಎದುರು ಪ್ರಶ್ನೆ ಮಾಡಿದ್ದಾರೆ. ಇಲ್ಲಿ ನಮ್ಮ ಸಂಬಂಧಿಕರೆಲ್ಲ ಬಂದಿದ್ದಾರೆ. ಆದರೆ ಅವರು ಸಂಬಂಧಿಕರು ಬಂದಿದ್ದಾರಾ..? ಯಾಕೆಂದರೆ ಅವರು ಮಾಡುತ್ತಿರುವ ವಾದವೇ ಸುಳ್ಳು ಎಂದು ಹೇಳಿದ್ದಾರೆ. ಇತ್ತ ಪುಷ್ಪ ಅವರು ಕೂಡ ಆರು ವರ್ಷದಿಂದ ಈ ಸಮಸ್ಯೆ ಇದೆ. ಕೋರ್ಟ್‌ನಲ್ಲಿ ವಿಚಾರಣೆಗೆ ಕರೆದಾಗ ದಾಖಲೆ ಇದ್ದವರೂ ಯಾಕೆ ಬರಲಿಲ್ಲ..? ಕಾಪೌಂಡ್ ಇದ್ದ ಜಾಗ ನನ್ನದೇ ಎಂದು ದೇವರಾಜ್ ಹೇಳಿದ್ದಾರೆ. ಆಗ ವಿಚಾರಣೆಗೆ ಬರದವರು ಈಗ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದಾರೆ ಆದರೆ ಅಲ್ಲಿಯೂ ಅವರಿಗೆ ಹಿನ್ನೆಡೆಯಾಗುತ್ತೆ ಎಂದು ಹೇಳಿದ್ದಾರೆ.ಹಾ

 ಪುಷ್ಪ ಅವರ ವಕೀಲರು ಹೇಳಿದ್ದೇನು?

ಸನದಲ್ಲಿ ಪುಷ್ಪ ಅರುಣ್‌ಕುಮಾರ್‌ ಅವರ ಮನೆ ಇದೆ. ಮನೆಯ ಸಮೀಪವಿರುವ ಐದು ಗಂಟೆ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಆರೋಪ ಮಾಡಿದ್ದಲ್ಲದೆ, ಕೋರ್ಟ್‌ ಆದೇಶವಿದೆ ಎಂದು ಹೇಳಿ ಜೆಸಿಬಿ ತಂದು ಕಾಂಪೌಂಡ್‌ ಒಡೆಯಲಾಗಿದೆ. ಪುಷ್ಪ ಹಾಗೂ ಅರುಣ್‌ ಕುಮಾರ್‌ ದಂಪತಿ ಇಲ್ಲಿಯೇ ವಾಸ ಮಾಡುತ್ತಾರೆ ಪುಷ್ಪ ಪರ ವಕೀಲರು ಹೇಳಿದ್ದಾರೆ