

ಬೆಳ್ತಂಗಡಿ : ಹಿಂದೂ ಸಮಾಜಕ್ಕಾಗಿ ಹಿಂದೂ ಸಮಾಜ ಸೇರಿಕೊಂಡು ಉತ್ಸವ ಮಾಡುತ್ತಿರುವುದು ವಿಶೇಷ. ಇದು ಕೇವಲ ಹಿಂದೂ ಸಂಘಟನೆಯ ಕಾರ್ಯಕ್ರಮ ಅಲ್ಲದೆ ಊರಿನ ಸಂಘ ಸಂಸ್ಥೆಗಳನ್ನು, ಸಾಮಾಜಿಕ ಧಾರ್ಮಿಕ ಕ್ಷೇತ್ರದ ಪ್ರಮುಖರನ್ನು ಸೇರಿಸಿ ಆಚರಿಸುತ್ತಿರುವ ಕಾರ್ಯಕ್ರಮ. ಹಿಂದೂಗಳನ್ನು ಮಾತ್ರವಲ್ಲದೆ, ಜಗತ್ತನ್ನು ಕಾಪಾಡಲು ಹಿಂದೂ ಸಮಾಜ ಬೇಕು ಎಂದು ಮಂಗಳೂರು ವಿಭಾಗದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯವಾಹಿ ಆಗಿರುವ ವಾದಿರಾಜ್ ಉಡುಪಿ ಅವರು ಹೇಳಿದರು.
ಬೆಳ್ತಂಗಡಿ ನಗರ ಮತ್ತು ಸವಣಾಲು ಒಳಗೊಂಡ ಬೆಳ್ತಂಗಡಿ ಮಂಡಲದ ವತಿಯಿಂದ ಫೆ.1ರಂದು ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ನಿವೃತ್ತ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಜಾನನ ಭಟ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಹುಣಕಟ್ಟೆ ಶ್ರೀ ರಾಮ ಭಜನಾ ಮಂಡಳಿಯಿಂದ ಕುಣಿತ ಭಜನೆ, ಸವಣಾಲು ಗ್ರಾಮದ ಬಾಲಕೃಷ್ಣ ನಾಯ್ಕ ತಂಡದವರಿಂದ ಗುಮ್ಮಟೆ ಕಲಾ ಪ್ರಸ್ತುತಿ, ಬೆಳ್ತಂಗಡಿ ನಗರದ ಯಮುನಾ ಅವರಿಂದ ಜನಪದ ಸಂಸ್ಕೃತಿಯ ಪಾರ್ದನ ಪ್ರಸ್ತುತಿ, ಬೀಟ್ ರಾಕರ್ಸ್ ಡಾನ್ಸ್ ಅಕಾಡೆಮಿ ತಂಡದಿಂದ ಸಾಂಸ್ಕೃತಿಕ ನೃತ್ಯ ಪ್ರದರ್ಶನ ನಡೆಯಿತು.ವೇದಿಕೆಯಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿಯ ಅಧ್ಯಕ್ಷ ಅಜಿತ್ ಜಿ ಶೆಟ್ಟಿ, ಕಾರ್ಯದರ್ಶಿ ವಸಂತ ಮರಕಡ ಮಚ್ಚಿನ, ಉಪಾಧ್ಯಕ್ಷರಾದ ಪ್ರೀತಿ ರಾವ್ ಬೆಳ್ತಂಗಡಿ, ದಾಮೋದರ ಬಂಗೇರ ಸವಣಾಲು, ಜೊತೆ ಕಾರ್ಯದರ್ಶಿಗಳಾದ ತುಕಾರಾಮ್ ಬಿ, ದಯಾನಂದ ರೈ ಸವಣಾಲು, ತಾಲೂಕು ಸಂಯೋಜಕ ಅನಿಲ್ ಕುಮಾರ್ ಯು, ನಿರ್ವಹಣಾ ಮಂಡಲದ ಸಹ ಕೋಶಾಧಿಕಾರಿ ಗಣೇಶ್ ಭಂಡಾರಿ ಉಪಸ್ಥಿತರಿದ್ದರು.
ಶಾಸಕ ಹರೀಶ್ ಪೂಂಜ, ಗುರುವಾಯನಕೆರೆ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮುಗುಳಿ ನಾರಾಯಣ್ ರಾವ್, ಬೆಳ್ತಂಗಡಿ ಮಂಡಲದ ಉಪಾಧ್ಯಕ್ಷರುಗಳಾದ ಗಂಗಾಧರ್ ರಾವ್ ಕೆವುಡೇಲು, ವಸಂತ ಮಜಲು ಕಳಿಯ, ಸುಬ್ರಹ್ಮಣ್ಯ ಕುಮಾರ್ ಆಗರ್ತ, ಜಯಂತ್ ಶೆಟ್ಟಿ ಮಡಂತ್ಯಾರು, ಸೇಸಪ್ಪ ಸಾಲಿಯಾನ್ ಬಾರ್ಯ, ಮನೋಹರ ಶೆಟ್ಟಿ ಬಾರ್ಯ, ಪುಷ್ಪರಾಜ್ ಶೆಟ್ಟಿ ಕಾಶಿಬೆಟ್ಟು, ಜಯ ಅನಂತಕೃಷ್ಣ ಭಟ್ ಕೊಳ್ಳೂರು, ರಕ್ಷಿತ್ ಪಣೆಕ್ಕರ, ಜೊತೆ ಕಾರ್ಯದರ್ಶಿಗಳಾದ ಶ್ರೇಯಾ ಶೆಟ್ಟಿ ಗುರುವಾಯನಕೆರೆ, ಕು। ಸುರಕ್ಷಾ ಆಚಾರ್ಯ ಲಾಯಿಲ, ಮನೋಹರ ಗೌಡ ಮೊಗೆರಡ್ಕ, ವೀರೇಂದ್ರ ಕುಮಾರ್ ಮಡಂತ್ಯಾರು ರೋಹಿತ್ ಶೆಟ್ಟಿ ಕುಪ್ಪೆಟ್ಟಿ, ಡಾ| ದಿವ ಕೊಕ್ಕಡ, ಕೋಶಾಧಿಕಾರಿ ಸ್ವಸ್ತಿಕ್ ಬೆಳ್ತಂಗಡಿ, ಸಹ ಕೋಶಾಧಿಕಾರಿ ಪ್ರಭಾಕರ ಶೆಟ್ಟಿ ಉಪ್ಪಡ್ಕ ಬೆಳ್ತಂಗಡಿ ಮಂಡಲ ನಿರ್ವಹಣಾ ತಂಡದ ಮಂಡಲ ಸಂಯೋಜಕ ಶಂಕರ್ ರಾವ್, ಪ್ರಮುಖರುಗಳಾದ ಪದ್ಮ ಕುಮಾರ್, ಶಶಿಧರ ಪೈ, ಅಕ್ಷಯ ಟಿ.ರಾವ್, ಯತೀಶ್ ಹೆಗ್ಡೆ, ಸುಖೇಶ್ ಶೆಟ್ಟಿ, ಸುಧೀರ್ ಕೆ.ಎನ್, ಶೈಲೇಶ್ ಕೆ, ರಾಮಕೃಷ್ಣ ಶರ್ಮಾ, ಸೀತಾರಾಮ್ ಆರ್ ಪ್ರಸಾದ್, ಮಂಜುನಾಥ, ಕರುಣಾಕರ ಬಂಗೇರ, ಮಿಥೇಶ್, ಸಮರ್ಥ್ ಡಿ. ಶೆಟ್ಟಿ, ಗಣೇಶ್ ಭಟ್ ಸವಣಾಲು, ಗೋಪಾಲ ಗೌಡ ಸವಣಾಲು, ಸಂತೋಷ ಗೌಡ ಸವಣಾಲು ಶಿವ ಪ್ರಸಾದ್ ಪುರೋಹಿತ್ ಸವಣಾಲು, ಅಕ್ಷಯ ಶೆಟ್ಟಿ ಸವಣಾಲು, ಭಾರತೀ ಶೆಟ್ಟಿ ಸವಣಾಲು, ವೀಣಾ ವಿ ಕುಮಾರ್, ಪ್ರೇಮ ಆಚಾರ್ಯ ಸವಣಾಲು ಹಾಗೂ ಸವಣಾಲು ಶಿವ ಪ್ರಸಾದ್ ಪುರೋಹಿತ್ ಸವಣಾಲು, ಅಕ್ಷಯ ಶೆಟ್ಟಿ ಸವಣಾಲು, ಭಾರತೀ ಶೆಟ್ಟಿ ಸವಣಾಲು, ವೀಣಾ ವಿ ಕುಮಾರ್, ಪ್ರೇಮ ಆಚಾರ್ಯ ಸವಣಾಲು ಹಾಗೂ ನೂರಾರು ಸಂಖ್ಯೆಯಲ್ಲಿ ಹಿಂದೂ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬೆಳ್ತಂಗಡಿ ಮಂಡಲ ನಿರ್ವಹಣಾ ತಂಡದ ಮಂಡಲ ಸಂಯೋಜಕ ಶಂಕರ್ ರಾವ್ ಪ್ರಾಸ್ತಾವಿಕವಾಗಿ ಸ್ವಾಗತಿಸಿದರು. ಸುಧೀರ್ ಅವರು ಕಾರ್ಯಕ್ರಮ ನಿರೂಪಿಸಿದರು.














