Home News Mangalore: ಧರ್ಮಸ್ಥಳ ಕೇಸ್‌: ಇಂದೂ ಯೂಟ್ಯೂಬರ್‌ ಸಮೀರ್‌ ಎಂ ಡಿ ವಿಚಾರಣೆ

Mangalore: ಧರ್ಮಸ್ಥಳ ಕೇಸ್‌: ಇಂದೂ ಯೂಟ್ಯೂಬರ್‌ ಸಮೀರ್‌ ಎಂ ಡಿ ವಿಚಾರಣೆ

Hindu neighbor gifts plot of land

Hindu neighbour gifts land to Muslim journalist

Mangalore: ಧರ್ಮಸ್ಥಳ ಕ್ಷೇತ್ರವನ್ನು ಅವಹೇಳನ ಮಾಡಿದ ಆರೋಪದಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯೂಟ್ಯೂಬರ್‌ ಸಮೀರ್‌ ಎಂ.ಡಿ. ಭಾನುವಾರ ಬೆಳ್ತಂಗಡಿ ಪೊಲೀಸ್‌ ಠಾಣೆಗೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ.

ಬೆಳ್ತಂಗಡಿ ಸರ್ಕಲ್‌ ಇನ್ಸ್‌ಪೆಕ್ಟರ್‌ ನಾಗೇಶ್‌ ಕದ್ರಿ ವಿಚಾರಣೆ ನಡೆಸಿದ್ದು, ಇಂದು (ಆಗಸ್ಟ್‌ 25) ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿ ದಾಖಲೆಗಳಿಗೆ ಸಹಿ ಪಡೆದು ಕಳುಹಿಸಿದ್ದಾರೆ. ಅಲ್ಲದೇ ಸಮೀರ್‌ ಎಂ.ಡಿ ವಿಡಿಯೋ ಮಾಡಲು ಬಳಸಿದ ಕಂಪ್ಯೂಟರ್‌ ಮತ್ತು ಮೊಬೈಲ್‌ ವಶಕ್ಕೆ ಪಡೆಯಲು ಪೊಲೀಸರು ಮುಂದಾಗಿದ್ದಾರೆ ಎಂದು ವರದಿಯಾಗಿದೆ.

ಸಮೀರ್‌ ವಿರುದ್ಧ ಒಂದು ತಿಂಗಳ ಹಿಂದೆಯೇ ಸುಮೊಟೋ ಕೇಸ್‌ ದಾಖಲಾಗಿತ್ತು. ವಿಚಾರಣೆಗೆಂದು ಎರಡು  ಬಾರಿ ನೋಟಿಸ್‌ ನೀಡಲಾಗಿತ್ತು. ಆದರೆ ಸಮೀರ್‌ ಉತ್ತರ ನೀಡದ ಕಾರಣ ವಶಕ್ಕೆ ಪಡೆಯಲು ಸಿದ್ಧತೆ ಮಾಡಿದ್ದಾಗ, ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು. ಭಾನುವಾರ ವಿಚಾರಣೆಗೆ ಹಾಜರಾಗಿದ್ದ ಸಮೀರ್‌, ಇಂದು ಕೂಡಾ ವಿಚಾರಣೆಗೆ ಹಾಜರಾಗಲಿದ್ದಾರೆ.