

Assembly Session: ವಿಧಾನಸಭಾ ಅಧಿವೇಶನದ ಸಮಯದಲ್ಲಿ ಕುಳಿತು ರಮ್ಮಿ ಆಡಿದ್ದ ಮಹಾರಾಷ್ಟ್ರ ಸಚಿವ ಮಾಣಿಕ್ರಾವ್ ಅವರಿಗೆ ಕ್ರೀಡಾ ಮತ್ತು ಯುವ ಕಲ್ಯಾಣ ಖಾತೆ ನೀಡಲಾಗಿದೆ. ಕೃಷಿ ಸಚಿವ ಸ್ಥಾನದಿಂದ ತೆಗೆದು ಹಾಕಿ ಕ್ರೀಡಾ ಖಾತೆ ನೀಡಲಾಗಿದೆ. ಅವರ ಸ್ಥಾನಕ್ಕೆ ದತ್ತಾತ್ರೇಯ ಭರಾಣೆ ಅವರನ್ನು ಹೊಸ ಕೃಷಿ ಸಚಿವರನ್ನಾಗಿ ನೇಮಕ ಮಾಡಲಾಗಿದೆ.
ಮಾಣಿಕ್ರಾವ್ ಕೊಕಟೆ ಆನ್ಲೈನ್ ಮೂಲಕ ವಿಧಾನಸಭಾ ಅಧಿಕವೇಶನದ ಸಂದರ್ಭ ರಮ್ಮಿ ಆಡುತ್ತಿದ್ದರು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಸಚಿವ ಸಂಪುಟ ಪುನರಚನೆ ನಡೆದಿದೆ.













