Ahmadabad : ವಿಮಾನದ ಬಾಲದೊಳಗೆ ಗಗನಸಖಿ ಶವ ಪತ್ತೆ!!

Ahmadabad: ಗುಜರಾತಿನ ಅಹಮದಾಬಾದ್ನಲ್ಲಿ ಸಂಭವಿಸಿದೆ ವಿಮಾನ ಅಪಘಾತದಲ್ಲಿ ಒಟ್ಟು 265 ಜನ ಸಾವನ್ನಪ್ಪಿದ್ದಾರೆ. ಈಗಾಗಲೇ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತಿದೆ. ಈ ನಡುವೆ ವಿಮಾನದ ಬಾಲದೊಳಗೆ ಗಗನಸಕಿ ಒಬ್ಬರ ಶವಪತ್ತೆಯಾಗಿದೆ.

ಹೌದು, ಶವಗಳನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ ಬಳಿಕ ವಿಮಾನದ ಅವಶೇಷಗಳ ತೆರವು ಕಾರ್ಯ ನಡೆಯುತ್ತಿತ್ತು. ಅಂತೆಯೇ ಬಿ.ಜೆ ಮೆಡಿಕಲ್ ಹಾಸ್ಟೆಲ್ ಮೇಲೆ ಸಿಲುಕಿದ್ದ ಏರ್ ಇಂಡಿಯಾ ವಿಮಾನದ ಬಾಲವನ್ನು ಶನಿವಾರ ತೆರವುಗೊಳಿಸಲಾಗಿದೆ. ಈ ಬಾಲದೊಳಗೆ ಗಗನಸಖಿಯೊಬ್ಬರ ಮೃತದೇಹ ಪತ್ತೆಯಾಗಿದೆ ಎಂದು ರಾಷ್ಟ್ರೀಯ ಭದ್ರತಾ ಪಡೆ(ಎನ್ಎಸ್ಜಿ)ಯ ಮೂಲಗಳು ತಿಳಿಸಿವೆ.
ಯಾರೂ ತಲುಪಲಾಗದ ಭಾಗದಲ್ಲಿ ಆಕೆಯ ದೇಹವಿದ್ದ ಕಾರಣ ರಕ್ಷಣಾ ಕಾರ್ಯಾಚರಣೆ ವೇಳೆ ಶವ ದೊರೆತಿಲ್ಲ. ಬಳಿಕ ತನಿಖೆ ವೇಳೆ ಎನ್ಎಸ್ಜಿ ಇದನ್ನು ಗಮನಿಸಿದೆ ಎಂದು ಮೂಲಗಳು ತಿಳಿಸಿವೆ.
Comments are closed.