Home News Ahmadabad : ವಿಮಾನದ ಬಾಲದೊಳಗೆ ಗಗನಸಖಿ ಶವ ಪತ್ತೆ!!

Ahmadabad : ವಿಮಾನದ ಬಾಲದೊಳಗೆ ಗಗನಸಖಿ ಶವ ಪತ್ತೆ!!

Hindu neighbor gifts plot of land

Hindu neighbour gifts land to Muslim journalist

Ahmadabad: ಗುಜರಾತಿನ ಅಹಮದಾಬಾದ್‌ನಲ್ಲಿ ಸಂಭವಿಸಿದೆ ವಿಮಾನ ಅಪಘಾತದಲ್ಲಿ ಒಟ್ಟು 265 ಜನ ಸಾವನ್ನಪ್ಪಿದ್ದಾರೆ. ಈಗಾಗಲೇ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತಿದೆ. ಈ ನಡುವೆ ವಿಮಾನದ ಬಾಲದೊಳಗೆ ಗಗನಸಕಿ ಒಬ್ಬರ ಶವಪತ್ತೆಯಾಗಿದೆ.

ಹೌದು, ಶವಗಳನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ ಬಳಿಕ ವಿಮಾನದ ಅವಶೇಷಗಳ ತೆರವು ಕಾರ್ಯ ನಡೆಯುತ್ತಿತ್ತು. ಅಂತೆಯೇ ಬಿ.ಜೆ ಮೆಡಿಕಲ್‌ ಹಾಸ್ಟೆಲ್‌ ಮೇಲೆ ಸಿಲುಕಿದ್ದ ಏರ್‌ ಇಂಡಿಯಾ ವಿಮಾನದ ಬಾಲವನ್ನು ಶನಿವಾರ ತೆರವುಗೊಳಿಸಲಾಗಿದೆ. ಈ ಬಾಲದೊಳಗೆ ಗಗನಸಖಿಯೊಬ್ಬರ ಮೃತದೇಹ ಪತ್ತೆಯಾಗಿದೆ ಎಂದು ರಾಷ್ಟ್ರೀಯ ಭದ್ರತಾ ಪಡೆ(ಎನ್‌ಎಸ್‌ಜಿ)ಯ ಮೂಲಗಳು ತಿಳಿಸಿವೆ.

ಯಾರೂ ತಲುಪಲಾಗದ ಭಾಗದಲ್ಲಿ ಆಕೆಯ ದೇಹವಿದ್ದ ಕಾರಣ ರಕ್ಷಣಾ ಕಾರ್ಯಾಚರಣೆ ವೇಳೆ ಶವ ದೊರೆತಿಲ್ಲ. ಬಳಿಕ ತನಿಖೆ ವೇಳೆ ಎನ್‌ಎಸ್‌ಜಿ ಇದನ್ನು ಗಮನಿಸಿದೆ ಎಂದು ಮೂಲಗಳು ತಿಳಿಸಿವೆ.