Home News ಉಡುಪಿ Udupi: ಕಾಮಿಡಿ ಕಿಲಾಡಿ-3 ವಿಜೇತ ರಾಕೇಶ್‌ ಪೂಜಾರಿ ನಿಧನ!

Udupi: ಕಾಮಿಡಿ ಕಿಲಾಡಿ-3 ವಿಜೇತ ರಾಕೇಶ್‌ ಪೂಜಾರಿ ನಿಧನ!

Image Credit:: Asianet Suvarna

Hindu neighbor gifts plot of land

Hindu neighbour gifts land to Muslim journalist

Udupi: ಕನ್ನಡ ಕಿರುತೆರೆಯಲ್ಲಿ ತನ್ನ ಹಾಸ್ಯದ ಮೂಲಕ ಜನರ ಮನಗೆದ್ದ ನಟ ರಾಕೇಶ್‌ ಪೂಜಾರಿ ಅವರು ವಿಧಿವಶರಾಗಿದ್ದಾರೆ. ಕಳೆದ ರಾತ್ರಿ ಉಡುಪಿ ಜಿಲ್ಲೆಯ ಕಾರ್ಕಳದ ನಿಟ್ಟೆ ಸಮೀಪದ ಮೆಹಂದಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಡ್ಯಾನ್ಸ್‌ ಮಾಡಿದ್ದರು. ಕಾಂತಾರ ಪ್ರಿಕ್ವೆಲ್‌ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದ ನಟ, ಖಾಸಗಿ ಕಾರ್ಯಕ್ರಮವೊಂದರಲ್ಲಿ ನಿನ್ನೆ ಪಾಲ್ಗೊಂಡಿದ್ದರು. ಸ್ನೇಹಿತರ ಜೊತೆ ಇದ್ದ ಸಂದರ್ಭದಲ್ಲಿ ಹೃದಯಾಘಾತ ಸಂಭವಿಸಿದ್ದು, ಲೋ ಬಿಪಿಯಿಂದ ಸಮಸ್ಯೆ ಕಾಣಿಸಿಕೊಂಡ ಮಾಹಿತಿ ಇದೆ.

ರಾಕೇಶ್‌ ಅವರು ಸುಸ್ತು ಎಂದು ಹೇಳಿದ್ದು, ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದ್ದಾರೆ ಎಂದು ವೈದ್ಯರು ಹೇಳಿರುವುದಾಗಿ ವರದಿಯಾಗಿದೆ. ಇಂದು (ಮೇ 12) ಒಂದು ಗಂಟೆಗೆ ಸಾವಿಗೀಡಾಗಿರುವ ರಾಕೇಶ್‌ ಅವರಿಗೆ ಇತ್ತೀಚೆಗಷ್ಟೇ ಆಕ್ಸಿಡೆಂಟ್‌ ಆಗಿತ್ತು. ಆರೋಗ್ಯ ಸಮಸ್ಯೆ ಇರಲಿಲ್ಲ.

ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.