Terrorist attack: ಕರಾವಳಿ ಪ್ರದೇಶದಲ್ಲಿ ಉಗ್ರ ಚಟುವಟಿಕೆ!

Terrorist attack: ಭಯೋತ್ಪಾದಕರ ಅಟ್ಟಹಾಸ ಮಿತಿ ಮೀರುತ್ತಿದೆ. ಇದೀಗ ಕರಾವಳಿ ಭಾಗದಲ್ಲಿ ಮತ್ತೆ ಸ್ಯಾಟಲೈಟ್ (Satallite phone) ಫೋನ್‌ಗಳು ಆಕ್ಟಿವ್ ಆಗಿರುವ ಮಾಹಿತಿ ಬೆಳಕಿಗೆ ಬಂದಿದ್ದು, ಇದರಿಂದ ಆ ಭಾಗದಲ್ಲಿ ಮತ್ತೆ ಭಯೋತ್ಪಾದಕರು ಸಕ್ರಿಯವಾದ ಶಂಕೆ ಉಂಟಾಗಿದೆ. ಈಗಾಗಲೇ ಮುಂಬೈ ಭಯೋತ್ಪಾದಕರ ದಾಳಿಯ (Mumbai terrorist attack) ಬಳಿಕ ದೇಶದಲ್ಲಿ ತುರಾಯಾ ಸ್ಯಾಟಲೈಟ್ ಫೋನ್ ನಿಷೇಧಿಸಲಾಗಿದೆ. ಆದ್ರೆ ಇದೀಗ ಮತ್ತೆ ಈ ಭಾಗದಲ್ಲಿ ಈ ಸ್ಯಾಟಲೈಟ್ ಪೋನ್‌ಗಳ ಬಳಕೆ ಶುರುವಾಗಿದೆ.

ಕಳೆದ 10 ದಿನಗಳಿಂದ ಕುಂದಾಪುರದ ದಟ್ಟ ಅರಣ್ಯ ಮಧ್ಯೆ ಸ್ಯಾಟಲೈಟ್ ಫೋನ್ ಆಕ್ಟಿವ್ ಆಗಿರುವುದು ಪತ್ತೆಯಾಗಿದ್ದು, ಅಂಪಾರು ಮತ್ತು ಹೆಮ್ಮಾಡಿ ಕೊಲ್ಲೂರು ರಸ್ತೆಯ ಬಾಳೆಕೆರೆ ಬಳಿ ಲೊಕೇಶನ್ ತೋರಿಸಿದೆ.

ಕೂಡಲೇ ಈ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ, ರಾಜ್ಯ ಕರಾವಳಿ ಪೋಲಿಸರಿಗೆ ಮಾಹಿತಿ ನೀಡಿದ್ದು, ದೇಶದ ಆಂತರಿಕ ಭದ್ರತೆಯ ವಿಚಾರವಾಗಿದ್ದು ರಾಜ್ಯ ಗುಪ್ತಚರ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದೆ ಎಂದು ತಿಳಿದು ಬಂದಿದೆ.

Leave A Reply

Your email address will not be published.