Home News UPS Scheme: ಸರ್ಕಾರಿ ನೌಕರರಿಗೆ ಹೊಸ ಯೋಜನೆ ಜಾರಿ! ಇನ್ಮುಂದೆ ಯುಪಿಎಸ್ ಪಿಂಚಣಿ ಲಭ್ಯ

UPS Scheme: ಸರ್ಕಾರಿ ನೌಕರರಿಗೆ ಹೊಸ ಯೋಜನೆ ಜಾರಿ! ಇನ್ಮುಂದೆ ಯುಪಿಎಸ್ ಪಿಂಚಣಿ ಲಭ್ಯ

UPS Scheme

Hindu neighbor gifts plot of land

Hindu neighbour gifts land to Muslim journalist

UPS Scheme: ಮೋದಿ ಸರ್ಕಾರ ನೌಕರರಿಗೆ ಹೊಸ ಪಿಂಚಣಿ ನೀತಿಯನ್ನು ಪ್ರಕಟಿಸಿ ಸಿಹಿ ಸುದ್ದಿ ನೀಡಿದೆ. ಹೌದು, ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಹೊಸ ಪಿಂಚಣಿ ಯೋಜನೆ ‘ಏಕೀಕೃತ ಪಿಂಚಣಿ ಯೋಜನೆ’ಗೆ (UPS Scheme) ಅನುಮೋದನೆ ನೀಡಿದೆ. ಈ ಯೋಜನೆಯಡಿಯಲ್ಲಿ ಮುಖ್ಯವಾಗಿ ಸರ್ಕಾರಿ ನೌಕರರು ಲಾಭವನ್ನು ಪಡೆಯುತ್ತಾರೆ.

ಮೋದಿ ಸರ್ಕಾರ ನೌಕರರಿಗೆ ಹೊಸ ಪಿಂಚಣಿ ನೀತಿಯನ್ನು ಪ್ರಕಟಿಸಿದ್ದು, ಹೊಸ ಪಿಂಚಣಿ ನೀತಿಯ ಹೆಸರು ಏಕೀಕೃತ ಪಿಂಚಣಿ ಯೋಜನೆ ಅಥವಾ UPS. ಇದರ ಅಡಿಯಲ್ಲಿ, ಒಬ್ಬ ಉದ್ಯೋಗಿಯು ಕನಿಷ್ಠ 25 ವರ್ಷಗಳ ಕಾಲ ಕೆಲಸ ಮಾಡಿದ್ದಲ್ಲಿ, ನಿವೃತ್ತಿಯ ಹಿಂದಿನ 12 ತಿಂಗಳುಗಳ ಸರಾಸರಿ ವೇತನದ ಕನಿಷ್ಠ 50 ಪ್ರತಿಶತವನ್ನು ಪಿಂಚಣಿಯಾಗಿ ಪಡೆಯುತ್ತಾನೆ.

ಕೇಂದ್ರ ಸರ್ಕಾರದ ನೂತನ ಪಿಂಚಣಿ ಆಗಿರುವ ಏಕೀಕೃತ ಪಿಂಚಣಿ ನೀತಿಯಲ್ಲಿ ಏನಿದೆ:

ಒಬ್ಬ ಪಿಂಚಣಿದಾರನು ಮರಣಹೊಂದಿದರೆ, ಅವನ ಕುಟುಂಬವು ಮರಣದ ಸಮಯದಲ್ಲಿ ಪಡೆದ ಪಿಂಚಣಿಯ ಶೇಕಡಾ 60ರಷ್ಟು ಪಡೆಯುತ್ತದೆ.

10 ವರ್ಷಗಳ ನಂತರ ಕೆಲಸ ಬಿಟ್ಟರೆ 10,000 ರೂಪಾಯಿ ಪಿಂಚಣಿ ಸಿಗುತ್ತದೆ.

ಹಣದುಬ್ಬರ ಸೂಚ್ಯಂಕದ ಲಾಭವನ್ನು ನೀವು ಪಡೆಯುತ್ತೀರಿ.

ಪ್ರತಿ ಆರು ತಿಂಗಳ ಸೇವೆಗೆ, ನಿವೃತ್ತಿಯ ನಂತರ ಮಾಸಿಕ ಸಂಬಳದ ಹತ್ತನೇ ಒಂದು ಭಾಗವನ್ನು (ಸಂಬಳ + ಡಿಎ) ಸೇರಿಸಲಾಗುತ್ತದೆ.