Mysore : ಮೈಸೂರು ಮಹಾರಾಜ, ಬಿಜೆಪಿ ಸಂಸದ ಯದುವೀರ್ ಒಡೆಯರ್ ಅರೆಸ್ಟ್ !!

Mysore : ಮೈಸೂರು ಮಹಾರಾಜ ಹಾಗೂ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಯದುವೀರ್ ಒಡೆಯರ್(Yaduveer Wadiyar) ಅವರನ್ನು ಪೋಲೀಸರು ಅರೆಸ್ಟ್ ಮಾಡಿದ್ದಾರೆ.

ರಾಜ್ಯದಲ್ಲಿ ಕೆಲವು ದಿನಗಳಿಂದ ಮುಡಾ ಹಗರಣ(Muda Sca ಹಾಗೂ ಪರಿಶಿಷ್ಟ ವರ್ಗದ ಹಗರಣ ಭಾರೀ ಸದ್ದು ಮಾಡುತ್ತಿದೆ. ಹೀಗಾಗಿ ಸರ್ಕಾರದ ವಿರುದ್ಧ ಹರಿಹಾಯಲು ಇದನ್ನು ಅಸ್ತ್ರವಾಗಿ ಬಳಸಿರುವ ಬಿಜೆಪಿ(BJP) ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತಿದೆ. ಇದು ದೊಡ್ಡ ಹೋರಾಟದ ಸ್ವರೂಪ ಪಡೆದುಕೊಂಡಿದೆ.

ಮೈಸೂರಿನಲ್ಲೂ(Mysore) ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ. ಇದರ ಮುಂದಾಳತ್ವವನ್ನು ಸಂಸದ ಯದುವೀರ್ ಒಡೆಯರ್ ಹೊತ್ತಿದ್ದರು. ಹೀಗಾಗಿ ಹೋರಾಟ ಉಗ್ರ ಸ್ವರೂಪ ಪಡೆಯುತ್ತಿದ್ದಂತೆ ಪೋಲೀಸರು ಹೋರಾಟಗಾರರನ್ನು ಬಂಧಿಸಿದ್ದಾರೆ. ಅಂತೆಯೇ ಸಂಸದ ಹಾಗೂ ಮೈಸೂರು ರಾಜರಾದ ಯದುವೀರ್ ಒಡೆಯರನ್ನೂ ಅರೆಸ್ಟ್ ಮಾಡಲಾಗಿದೆ.

Samantha Ruth Prabhu: ಸಿನಿ ರಂಗಕ್ಕೆ ಗುಡ್‌ಬೈ ಹೇಳಲಿದ್ದಾರಾ ಸ್ಯಾಮ್‌? ಒಪ್ಪಿಕೊಂಡ ಸಿನಿಮಾದಿಂದ ಸಮಂತಾ ಹೊರಕ್ಕೆ

Leave A Reply

Your email address will not be published.