Bus Accident: ಕಂದಕಕ್ಕೆ ಉರುಳಿದ ಬಸ್ – ಭಾರೀ ಅನಾಹುತ

ಪ್ರಯಾಣಿಕರನ್ನು ಹೊತ್ತುಯುತ್ತಿದ್ದ ಬಸ್ಸೊಂದು ಉರುಳಿ ಬಿದ್ದಿದ್ದು ಸರಿಸುಮಾರು 200 ಮೀಟರ್ ಆಳದ ಕಂದಕಕ್ಕೆ. ಈ ಘಟನೆಯು 36 ಜನರ ಪ್ರಾಣವನ್ನೇ ಬಲಿ ತೆಗೆದುಕೊಂಡಿದ್ದು, ಬಸ್ ಪ್ರಯಾಣಿಕರ ಆತಂಕವನ್ನು ಹೆಚ್ಚಿಸಿದೆ. ನಿಜವಾಗಿಯೂ ಅಲ್ಲಿ ನಡೆದಿದ್ದಾದರೂ ಏನು?

ಈ ಘಟನೆ ಸಂಭವಿಸಿದ್ದು ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ. ದೋಡಾ ಜಿಲ್ಲೆಯ ಮೂಲಕ ಕಿಶ್ತ್ವಾರದಿಂದ ಜಮ್ಮುಗೆ ಅಪಾಯದ ಅರಿವೇ ಇಲ್ಲದ ಪ್ರಯಾಣಿಕರನ್ನು ಹೊತ್ತುಯುತ್ತಿದ್ದ ಈ ಬಸ್ ಅಸ್ಸಾರ್ ಎಂಬ ಪ್ರದೇಶದಲ್ಲಿನ ತೃಣಾಲ್ ಬಳಿ ಕಡಿದಾದ ರಸ್ತೆಯ ಮೂಲಕ ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ಕಾರಣ ಬಸ್ ಕಂದಕಕ್ಕೆ ಉರುಳಿದ್ದು, ಪ್ರಯಾಣಿಕರ ಪ್ರಾಣವನ್ನೇ ಪಣಕ್ಕಿಟ್ಟಂತಹ ಸನ್ನಿವೇಶ ಇದಾಗಿದೆ.

ಈ ಸಂದರ್ಭದಲ್ಲಿ ಬಸ್ ನಲ್ಲಿ ಡ್ರೈವರ್ ಹಾಗೂ ನಿರ್ವಾಹಕ ಸೇರಿದಂತೆ ಒಟ್ಟು 55 ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಮತ್ತೆ ಇದು ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.

ಉಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ. ಘಟನೆಯ ಕುರಿತು ಮಾಹಿತಿಯನ್ನು ಪಡೆದುಕೊಂಡ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಜನರಲ್ ಆಗಿರುವಂತಹ ಮನೋಜ್ ಸಿನ್ಹಾ ಅವರು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

 

ಇದನ್ನು ಓದಿ: Fenugreek Seeds Benefits: ಪುರುಷರೇ ದಿನಕ್ಕೆ ಒಂದು ಚಮಚ ಇದನ್ನು ಸೇವಿಸಿ ಸಾಕು – ಮತ್ತೆ ನಿಮ್ಮ ಸಾಮರ್ಥ್ಯದ ಚಮತ್ಕಾರ ನೋಡಿ

Leave A Reply

Your email address will not be published.