Mangaluru: ಪ್ರಿಯತಮೆ ಔಟಿಂಗ್ ಬಂದಿಲ್ಲ ಎಂದು ಪಿಜಿಗೆ ಕಲ್ಲೆಸೆದ ಪ್ರಿಯಕರ !!ಕಲ್ಲೇಟು ಹೊಡೆದ ಯುವಕಗೆ ಎರಡೇಟು ಬಿಗಿದ ಸ್ಥಳೀಯರು

Mangaluru news man who pelted stones at PG because his girlfriend not come for outing

Mangaluru: ಲವ್ವರ್‌ ಔಟಿಂಗ್‌ ಗೆ ಬರಲಿಲ್ಲವೆಂದು ಆಕೆ ಕೆಲಸ ಮಾಡುತ್ತಿದ್ದ ಕಟ್ಟಡಕ್ಕೆ ಯುವಕನೋರ್ವ ಕಲ್ಲು ಎಸೆದ ಘಟನೆಯೊಂದು ಸೆಂಟ್‌ ಆಗ್ನೇಸ್‌ ಕಾಲೇಜು ಮುಂಭಾಗದಲ್ಲಿ ನಡೆದಿದೆ(Mangaluru) .

ಈತನ ಈ ಕೆಲಸದಿಂದ ಕಟ್ಟಡದ ಗಾಜು ಪುಡಿಯಾಗಿದ್ದು, ಸಾರ್ವಜನಿಕರು ಯುವಕನಿಗೆ ಧರ್ಮದೇಟು ನೀಡಿದ್ದಾರೆನ್ನಲಾಗಿದೆ.

ವಿವೇಕ್‌ (18) ಎಂಬಾತನೇ ಈ ಕೃತ್ಯವೆಸಗಿದ ಆರೋಪಿ. ಈತ ಸುಳ್ಯ ನಿವಾಸಿ. ಈತ ಯುವತಿಯೊಂದಿಗೆ ಪ್ರೀತಿಯಲ್ಲಿದ್ದು, ನಿನ್ನೆ (ನ.2) ರ ಸಂಜೆ ಔಟಿಂಗ್‌ಗೆ ಬರುವಂತೆ ಕರೆ ಮಾಡಿದ್ದಾನೆ. ಆದರೆ ಯುವತಿ ಬರಲೊಪ್ಪದೆ ನಿರಾಕರಣೆ ಮಾಡಿದ್ದಾಳೆ. ಇದಕ್ಕೆ ಕೋಪಗೊಂಡ ಪ್ರಿಯಕರ ವಿವೇಕ್‌ ಆಕೆ ಕೆಲಸ ಮಾಡುತ್ತಿದ್ದ ಪಿಜಿಗೆ ಕಲ್ಲು ಎಸೆದಿದ್ದಾನೆ.

ಗಾಜು ಪುಡಿಪುಡಿಯಾಗಿದ್ದು, ಸಾರ್ವಜನಿಕರು ವಿವೇಕ್‌ನನ್ನು ಹಿಡಿದು ಥಳಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಹೈನುಗಾರಿಕೆ ಸಂಕಷ್ಟ : ಜಾನುವಾರು ಮೇವಿನ ದರದಲ್ಲಿ ಭಾರೀ ಏರಿಕೆ!

Leave A Reply

Your email address will not be published.