Suicide case: ಒಂದು ದೋಣಿಗೆ ಎರಡು ಊರುಕೋಲು ಹಿಡಿದು ಹೊರಟ ಯುವತಿ, ಪಯಣದ ಶುರುವಲ್ಲೇ ಬದುಕು ನೀರಿಗೆ !

Suicide case woman committed suicide by falling into the river

Suicide case: ಪ್ರೀತಿ ಎಂಬ ನವಿರಾದ ಭಾವಕ್ಕೆ ನಂಬಿಕೆ ಅತ್ಯವಶ್ಯಕ. ನೈಜ ಪ್ರೀತಿ ಬಣ್ಣ ಧರ್ಮದ ಎಲ್ಲೆಯ ಗಡಿ ದಾಟಿ ಸ್ವಚ್ಚಂದ ಹಕ್ಕಿಯಂತೆ ಪ್ರೇಮಿಸಿ ಮದುವೆ ಎಂಬ ಬಂಧಕ್ಕೆ ಮುನ್ನುಡಿ ಬರೆಯುವುದು ಸಹಜ. ಪ್ರೀತಿಯ ನಿಜವಾದ ವ್ಯಾಖ್ಯಾನ ನೀಡುವಂತಹ ಅದೆಷ್ಟೋ ಆದರ್ಶ ಅಪರೂಪದ ಜೋಡಿಗಳನ್ನು ನಾವು ನೋಡಬಹುದು. ಅದೇ ರೀತಿ ಪ್ರೀತಿ ಪ್ರೇಮ ಪ್ರಣಯ ಎಂದು ನಾಲ್ಕು ದಿನ ಅಲೆದಾಡಿ ಮತ್ತೆ ಯಾರನ್ನೋ ಪ್ರೀತಿಸುವ ನಾಟಕವಾಡಿ ನಾನೊಂದು ತೀರ ನೀನೊಂದು ತೀರ ಎಂದು ವರ್ತಿಸುವವರು ಕೂಡ ಇದ್ದಾರೆ.

ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿ, ಇತ್ತೀಚೆಗಷ್ಟೇ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ ಯುವತಿ ಪ್ರೀತಿ ಪ್ರೇಮ ಎಂದು ಇಬ್ಬರ ಜೊತೆಗೆ ಪ್ರೇಮ ಸಲ್ಲಾಪದಲ್ಲಿ ಮುಳುಗಿ ಸಾವಿನ ಕದ ತಟ್ಟಿದ ಘಟನೆ ನಡೆದಿದೆ. ಆಂಧ್ರದ ಅನಂತಪುರ ಜಿಲ್ಲೆಯ ಧರ್ಮಾವರಂ ನಗರದ ಸತ್ಯ ಸಾಯಿ ಬಡಾವಣೆಯವಳಾದ ಜಿ ನಿಹಾರಿಕಾ(22) ಮೃತಪಟ್ಟ ಯುವತಿ.

ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಇಂಜಿನಿಯರಿಂಗ್(Engineering) ಕಾಲೇಜಿನಲ್ಲಿ ಬಿ.ಟೆಕ್ ಮುಗಿಸಿ ಬೆಂಗಳೂರಿನಲ್ಲಿಯೇ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳೆನ್ನಲಾಗಿದೆ. ಮೊನ್ನೆ ಜೂ.23 ರಂದು ಕೆಲಸಕ್ಕೆ ಹೋದಾಕೆ ವಾಪಸ್ ಪಿ.ಜಿಗೆ ಬಂದು ತನ್ನ ಮನೆ ಆಂದ್ರದ ಧರ್ಮಾರಂನತ್ತ ಬಸ್​ನಲ್ಲಿ ಹೊರಟವಳು ಚಿಕ್ಕಬಳ್ಳಾಪುರ(Chikkaballapur)ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ಬಸ್ ನಿಂದ ಇಳಿದು ಆ ಬಳಿಕ ಚಿತ್ರವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಬ್ರಿಡ್ಜ್ ಬಳಿ ಬಂದಿದ್ದು ನೀರಿಗೆ ಹಾರಿ ಮೃತಪಟ್ಟಿದ್ದಾಳೆ.

ಅಸಲಿಗೆ ಯುವತಿ ಆತ್ಮಹತ್ಯೆಗೆ ಶರಣಾಗಲೂ ಕಾರಣವೇನು ಎಂದು ಗಮನಿಸಿದರೆ, ನಿಹಾರಿಕ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭ ತನ್ನ ಸಹಪಾಠಿ ಚವ್ವ ವಂಶಿಧರ್​ನನ್ನು ಲವ್ ಮಾಡಿ ಆತನ ಜೊತೆಗೆ ಸುತ್ತಾಟ ನಡೆಸಿದ್ದಾಳಂತೆ. ಈ ನಡುವೆ ಇನ್​ಸ್ಟಾಗ್ರಾಮ್​ನಲ್ಲಿ ಆಂಧ್ರದ ಅಜಯ್ ಎನ್ನುವಾತನ ಜೊತೆಗೆ ಕೂಡ ಪ್ರೇಮ್ ಕಹಾನಿ ನಡೆದಿದೆ.ಈ ವಿಚಾರ ಇಬ್ಬರು ಯುವಕರಿಗೂ ತಿಳಿದು ಇಬ್ಬರು ಕೂಡ ಆಕೆಗೆ ಕಿರುಕುಳ ನೀಡಲು ಆರಂಭಿಸಿದ್ದಾರೆ. ಹೀಗಾಗಿ, ಮನನೊಂದ ಯುವತಿ ಕಿರಕುಳ, ಅವಮಾನ, ಮಾನಸಿಕ ಹಿಂಸೆ ತಾಳಲಾರದೆ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಕಾಲೇಜಿನಲ್ಲಿ ಒಬ್ಬ, ಹೊರಗಡೆ ಇನ್ನೊಬ್ಬ ಎಂದು ಪ್ರೀತಿ ಪ್ರೇಮದ ಹೆಸರಿನಲ್ಲಿ ಮೋಜು ಮಸ್ತಿ ಮಾಡಲು ಹೋದ ವಿದ್ಯಾವಂತ ಯುವತಿ ತನ್ನ ವಯೋಸಹಜ ಆಕರ್ಷಣೆಗೆ ಒಳಗಾಗಿ ಸಾವಿನ ದವಡೆಗೆ ಸಿಲುಕಿದ ಘಟನೆ ನಡೆದಿದೆ.

ಮತ್ತೊಂದೆಡೆ ಇದಾವುದರ ಪರಿವೇ ಇಲ್ಲದ ಪೋಷಕರು ಮನೆಗೆ ಬರುತ್ತೇನೆ ಎಂದು ಹೇಳಿದ ಮಗಳು ನಾಲ್ಕು ದಿನ ಕಳೆದರೂ ಮನೆ ಕಡೆ ಬಾರದೆ ಇದ್ದಾಗ ಆತಂಕದಿಂದ ಬಾಗೇಪಲ್ಲಿ ಸುತ್ತಮುತ್ತಲ ಪ್ರದೇಶಗಳ ಸಂಬಂಧಿಗಳಿಗೆ ಮಾಹಿತಿ ನೀಡಿದ್ದಾರೆ. ಅಷ್ಟರಲ್ಲಿ ಬಾಗೇಪಲ್ಲಿ ಬಳಿ ಯುವತಿ ಶವ ದೊರೆತ ಮಾಹಿತಿಯನ್ನೂ ಆಧಾರಿಸಿ ಬಂದು ನೋಡಿದ ಸಂದರ್ಭ ನಿಹಾರಿಕ ಸಾವಿನ ದವಡೆಗೆ ಸಿಲುಕಿದ ವಿಚಾರ ಬಯಲಾಗಿದೆ. ಈ ಪ್ರಕರಣದ ಕುರಿತು ಬಾಗೇಪಲ್ಲಿ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.