Home National Government Job: ಅನುಕಂಪ ಆಧಾರದಲ್ಲಿ ಕೆಲಸ ಪಡೆಯೋದು ನಿಮ್ಮ ಅಧಿಕಾರ ಅಲ್ಲ, ಅಗತ್ಯ ಪರೀಕ್ಷೆ ಪಾಸ್...

Government Job: ಅನುಕಂಪ ಆಧಾರದಲ್ಲಿ ಕೆಲಸ ಪಡೆಯೋದು ನಿಮ್ಮ ಅಧಿಕಾರ ಅಲ್ಲ, ಅಗತ್ಯ ಪರೀಕ್ಷೆ ಪಾಸ್ ಆಗೋದು ಕಡ್ಡಾಯ – ಸುಪ್ರೀಂ ಕೋರ್ಟು

Government job
Image source: Varthabharathi

Hindu neighbor gifts plot of land

Hindu neighbour gifts land to Muslim journalist

Government Job: ಅನುಕಂಪದ ಆಧಾರದ ಮೇಲೆ ನೀಡಲಾದ ಸರ್ಕಾರಿ ಕೆಲಸವನ್ನು (Government Job) ಅವಲಂಬಿತರು ಹಕ್ಕಾಗಿ ಕೇಳುವಂತಿಲ್ಲ. ಅಂದರೆ ಸಂತ್ರಸ್ತ ಕುಟುಂಬವನ್ನು ಹಠಾತ್ ಬಿಕ್ಕಟ್ಟಿನಿಂದ ಹೊರಬರಲು ಅನುವು ಮಾಡಿಕೊಡುವುದು ಅದರ ಉದ್ದೇಶವಾಗಿದೆ. ಮುಖ್ಯವಾಗಿ ಅನುಕಂಪದ ಆಧಾರದ ಮೇಲೆ ನೀಡಲಾಗುವ ಉದ್ಯೋಗದಲ್ಲಿ ಶೈಕ್ಷಣಿಕ ಮತ್ತು ವೃತ್ತಿಪರ ಅರ್ಹತೆಗಳನ್ನು ಪೂರೈಸುವುದು ಅವಶ್ಯಕ ಎಂದು ತೀರ್ಪು ನೀಡಿದೆ.

ಒಂದು ವೇಳೆ ವ್ಯಕ್ತಿ ಅರ್ಹತೆಗಳನ್ನ ಪೂರೈಸಲು ವಿಫಲವಾದ್ರೆ, ಆತನನ್ನ ಕೆಳ ದರ್ಜೆಯಲ್ಲಿ ಇರಿಸಬೇಕು ಎಂದಲ್ಲ. ಅನುಕಂಪದ ಆಧಾರದ ಮೇಲೆ ನೀಡಲಾದ ಕೆಲಸವು ಹಕ್ಕಲ್ಲ ಮತ್ತು ಇದಕ್ಕಾಗಿ, ಅರ್ಹತೆಗಳನ್ನು ಪೂರೈಸುವುದು ಅವಶ್ಯಕವಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದಲ್ಲಿ ಅನುಕಂಪದ ಆಧಾರದ ಮೇಲೆ ಉದ್ಯೋಗ ಕಳೆದುಕೊಂಡವರಿಗೆ ಪರಿಹಾರವನ್ನು ನಿರಾಕರಿಸಿತು. ಯಾಕೆಂದರೆ ಒಬ್ಬ ಚಾಲಕನ ತಂದೆಯ ಮರಣದ ನಂತ್ರ ರೆಹಾನ್’ಗೆ ಸಂಖ್ಯಾಶಾಸ್ತ್ರ ಇಲಾಖೆಯಲ್ಲಿ ಕಿರಿಯ ಸಹಾಯಕರಾಗಿ ಕೆಲಸ ನೀಡಲಾಯಿತು. ಈ ಕೆಲಸಕ್ಕಾಗಿ ಬೇಸಿಕ್ ಕಂಪ್ಯೂಟರ್ ಮತ್ತು ಟೈಪಿಂಗ್‌’ನ ಇಲಾಖಾ ಪರೀಕ್ಷೆಯನ್ನು ಬರೆದು ಮತ್ತು ಕನಿಷ್ಠ ಅಂಕಗಳನ್ನು ಗಳಿಸಲು ಸೂಚಿಸಲಾಗಿತ್ತು. ಆದರೆ, ಆತ ಕಂಪ್ಯೂಟರ್ ಮತ್ತು ಟೈಪಿಂಗ್ ಪರೀಕ್ಷೆಯನ್ನು ಪಾಸ್ ಮಾಡಲು ಸಾಧ್ಯವಾಗಲಿಲ್ಲ.

ನಂತರ ಆತನಿಗೆ ಮತ್ತೊಂದು ಅವಕಾಶವನ್ನು ನೀಡಲಾಯಿತು ಮತ್ತು ಈ ಸಂದರ್ಭದಲ್ಲೂ ಆತ ಟೈಪಿಂಗ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗಲಿಲ್ಲ. ಈ ಆಧಾರದ ಮೇಲೆ ಮೇಲೆ, ಸಾಂಖ್ಯಿಕ ಅಧಿಕಾರಿ ಆತನ ಕೆಲಸದಿಂದ ವಜಾಗೊಳಿಸಿದರು.

ನಂತರ ಈ ಆದೇಶವನ್ನು ಅಲಹಾಬಾದ್ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದು, ಕಿರಿಯರಿಗೆ ಅರ್ಹರಲ್ಲದಿದ್ದರೆ, ಆತನಿಗೆ 4 ನೇ ತರಗತಿಯ ಆಧಾರದ ಮೇಲೆ ಕೆಲಸ ನೀಡಲು ಮನವಿ ಮಾಡಿದರು.

ಆದರೆ, ಇದರ ವಿರುದ್ಧ ಯುಪಿ ಸರ್ಕಾರ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದರು. ನಂತರ ಈ ಮನವಿಯನ್ನು ತಿರಸ್ಕರಿಸಲಾಗಿದೆ. ಇದರ ನಂತರ, ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತು ಮತ್ತು ಕೊನೆಗೂ ಆದೇಶವು ಸೂಕ್ತವಲ್ಲ ಎಂದು ಹೇಳಿದೆ.

ಇದನ್ನೂ ಓದಿ: Temporary Number Plate: ನಿಮಗಿದು ಗೊತ್ತೇ? ತಾತ್ಕಾಲಿಕ ನಂಬರ್‌ ಪ್ಲೇಟ್‌ಗೆ ದಂಡ ವಿಧಿಸಲು ಸಾಧ್ಯವೇ? ಟ್ರಾಫಿಕ್‌ ಪೊಲೀಸರು ನಿಮ್ಮನ್ನು ತಡೆದರೆ ಏನು ಮಾಡಬೇಕು?