Home latest ಸೌದಿ ಅರೇಬಿಯಾ : ಒಂಟೆಗೆ ಕಾರು ಡಿಕ್ಕಿ | ಮಂಗಳೂರಿನ ಮೂವರು ಸೇರಿ ಬಾಂಗ್ಲಾದ...

ಸೌದಿ ಅರೇಬಿಯಾ : ಒಂಟೆಗೆ ಕಾರು ಡಿಕ್ಕಿ | ಮಂಗಳೂರಿನ ಮೂವರು ಸೇರಿ ಬಾಂಗ್ಲಾದ ಓರ್ವನ ಸಾವು!

Hindu neighbor gifts plot of land

Hindu neighbour gifts land to Muslim journalist

ಸೌದಿ ಅರೇಬಿಯಾದ(Saudi Arabia) ರಿಯಾದ್ ಪ್ರಾಂತ್ಯದ ಖುರೈಸ್ ರಸ್ತೆಯ ಬಳಿ ಕಾರೊಂದು ಒಂಟೆಗೆ(Camel) ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತವೊಂದು ಸಂಭವಿಸಿದೆ ಎಂದು ತಿಳಿದುಬಂದಿದೆ. ಈ ಅಪಘಾತದಲ್ಲಿ ಮಂಗಳೂರು ಮೂಲದ ಅಕಿಲ್, ನಾಸಿರ್, ರಿಜ್ವಾನ್ ಹಾಗೂ ಬಾಂಗ್ಲಾ ಮೂಲದ ಯುವಕ ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

SAQCO ಕಂಪನಿಯ ನಾಲ್ಕು ನೌಕರರು ಕಾರಿನಲ್ಲಿ ಖುರೈಸ್ ರಸ್ತೆಯ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭ ಕಾರು ನಿಯಂತ್ರಣ ತಪ್ಪಿದ್ದಲ್ಲದೆ ಒಂಟೆಗೆ ಡಿಕ್ಕಿ ಹೊಡೆದ ಪರಿಣಾಮ ಈ ಭೀಕರ ಅಪಘಾತ ಸಂಭವಿಸಿದೆ. ಈ ವೇಳೆ, ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರು ಕೂಡ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇವರಲ್ಲಿ ಅಕಿಲ್ ಮಂಗಳೂರಿನ ಬೋಳಾರ್ ನಿವಾಸಿಯಾಗಿದ್ದು, ರಿಜ್ವಾನ್ ಹಳೆಯಂಗಡಿ ಕದಿಕೆ ನಿವಾಸಿ ಎನ್ನಲಾಗಿದೆ. ಸದ್ಯ ಮೃತ ದೇಹಗಳನ್ನು ಸೌದಿಯ ಅಲ್ ಹಸ್ಸಾ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಈ ಪ್ರಕರಣದ ಕುರಿತು ಸೌದಿಯ ಅಧಿಕಾರಿಗಳು ಮಂಗಳೂರಿನ ಸಂತ್ರಸ್ತ ಕುಟುಂಬದವರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.