Home Karnataka State Politics Updates RSS ನಿಜವಾದ ಕಾಫಿಯಿದ್ದಂತೆ, ಬಿಜೆಪಿ ಕಾಫಿಯ ಮೇಲಿನ ನೊರೆಯಷ್ಟೆ ; RSS ಅನ್ನು ಈಗ ಸೋಲಿಸಲು...

RSS ನಿಜವಾದ ಕಾಫಿಯಿದ್ದಂತೆ, ಬಿಜೆಪಿ ಕಾಫಿಯ ಮೇಲಿನ ನೊರೆಯಷ್ಟೆ ; RSS ಅನ್ನು ಈಗ ಸೋಲಿಸಲು ಆಗಲ್ಲ – ರಾಜಕೀಯ ತಂತ್ರಜ್ಞ ಪ್ರಶಾಂತ್‌ ಕಿಶೋರ್‌

Hindu neighbor gifts plot of land

Hindu neighbour gifts land to Muslim journalist

ರಾಜಕೀಯ ತಂತ್ರಜ್ಞಾನ ಪ್ರಶಾಂತ್ ಕಿಶೋರ್ ಅವರು ಆರ್ ಎಸ್ ಎಸ್ ಬಗ್ಗೆ ವಿಭಿನ್ನ ಹೇಳಿಕೆ ನೀಡಿದ್ದಾರೆ. ಆರ್‌ಎಸ್‌ಎಸ್‌ (RSS) ನಿಜವಾದ ಕಾಫಿ. ಬಿಜೆಪಿ ಈ ಕಾಫಿಯ ಮೇಲಿನ ನೊರೆ ಇದ್ದಂತೆ ಎಂದು ರಾಜಕೀಯ ತಂತ್ರಜ್ಞ, ಕಾರ್ಯಕರ್ತ ಪ್ರಶಾಂತ್‌ ಕಿಶೋರ್‌ (Prashant Kishor) ಹೇಳಿಕೆ ನೀಡಿದ್ದಾರೆ.

ಪ್ರಶಾಂತ್ ಕಿಶೋರ್ ಅವರು ಬಿಹಾರದಲ್ಲಿ 3,500 ಕಿಲೋಮೀಟರ್‌ವರೆಗೆ ಸುದೀರ್ಘ ಪಾದಯಾತ್ರೆ ಕೈಗೊಂಡಿದ್ದಾರೆ. ಮೊನ್ನೆ ಅಕ್ಟೋಬರ್ 2 ರಿಂದ ಪ್ರಾರಂಭವಾದ ಈ ಕಾಲ್ನಡಿಗೆ ಮುಂದುವರೆದಿದೆ. ಪಾದಯಾತ್ರೆ ವೇಳೆ ದಾರಿ ಮಧ್ಯ ಅವರು ಮಾತಾಡುತ್ತಿದ್ದರು.

ಮಹಾತ್ಮ ಗಾಂಧಿಯವರ ಕಾಂಗ್ರೆಸ್ ಅನ್ನು ಪುನರುಜ್ಜೀವನಗೊಳಿಸುವ ಮೂಲಕ ಮಾತ್ರ ಗೋಡ್ಸೆಯ ಸಿದ್ಧಾಂತವನ್ನು ಸೋಲಿಸಬಹುದು. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಜಗನ್ ಮೋಹನ್ ಅವರಂತಹವರಿಗೆ ಸಹಾಯ ಮಾಡುವ ಬದಲು ನಾನು ಆ ದಿಕ್ಕಿನಲ್ಲಿ ಕೆಲಸ ಮಾಡಿದ್ದರೆ ಉತ್ತಮವಾಗಿರುತ್ತಿತ್ತು ಎಂದು ಅವರು ತಿಳಿಸಿದ್ದಾರೆ.

‘ ನೀವು ಎಂದಾದರೂ ಒಂದು ಲೋಟದಲ್ಲಿ ಕಾಫಿಯನ್ನು ನೋಡಿದ್ದೀರಾ? ಮೇಲ್ಭಾಗದಲ್ಲಿ ಆವರಿಸಿಕೊಂಡಿರುವ ನೊರೆಯೇ ಬಿಜೆಪಿ. ಅದರ ಕೆಳಗೆ ಆರ್‌ಎಸ್‌ಎಸ್‌ನ ಆಳವಾದ ರಚನೆ ಇದೆ. ಸಂಘವು ಸಾಮಾಜಿಕ ರಚನೆಯಲ್ಲಿ ತನ್ನ ದಾರಿಯನ್ನು ಹುಟ್ಟುಹಾಕಿದೆ. ಅದನ್ನು ಈಗ ಸೋಲಿಸಲಾಗುವುದಿಲ್ಲ ‘ ಎಂದು ಅವರು ಹೇಳಿದ್ದಾರೆ.

ಸಿಎಎ, ಎನ್‌ಪಿಆರ್, ಎನ್‌ಆರ್‌ಸಿ ವಿರುದ್ಧ ರಾಷ್ಟ್ರವು ಕಿಡಿಕಾರಿದ್ದಾಗ ನಾನು ಜೆಡಿಯು ರಾಷ್ಟ್ರೀಯ ಉಪಾಧ್ಯಕ್ಷನಾಗಿದ್ದೆ. ನನ್ನ ಪಕ್ಷದ ಸಂಸದರು ಸಂಸತ್ತಿನಲ್ಲಿ ಪೌರತ್ವ ತಿದ್ದುಪಡಿ ಮಸೂದೆಯ ಪರವಾಗಿ ಮತ ಚಲಾಯಿಸಿದ್ದಾರೆ ಎಂದು ತಿಳಿದು ದಿಗ್ಭ್ರಮೆಗೊಂಡಿದ್ದೆ ಎಂದು ಅವರು ಹೇಳಿದ್ದಾರೆ.