ಕೇದಾರನಾಥದಲ್ಲಿ ಭೀಕರ ದುರಂತ!!ಆರು ಮಂದಿ ಶಿವ ಭಕ್ತರು ಸ್ಥಳದಲ್ಲೇ ಸಾವು!

Share the Article

ಉತ್ತರಾಖಂಡ:ರಾಜ್ಯದ ಪ್ರಮುಖ ಶಿವ ದೇವಾಲಯ, ಕೇದಾರನಾಥದಲ್ಲಿ ಭಕ್ತರನ್ನು ಕರೆದುಕೊಂಡು ಹೋಗುತ್ತಿದ್ದ ಹೆಲಿಕಾಪ್ಟರ್ ಒಂದು ಪತನಗೊಂಡು ಇಬ್ಬರು ಪೈಲೆಟ್ಗಳ ಸಹಿತ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು,ಇನ್ನೊಬ್ಬರ ಗುರುತು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.

ಘಟನೆಯು ಕೇದಾರನಾಥದಿಂದ ಅಣತಿ ದೂರದ ಫಾಟಾದಲ್ಲಿ ನಡೆದಿದ್ದು, ಕೇದಾರನಾಥದಿಂದ ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಹವಾಮಾನ ವೈಪರೀತ್ಯದಿಂದ ಅಪಘಾತಕ್ಕೆ ಈಡಾಗಿದೆ ಎಂದು ತಿಳಿದುಬಂದಿದೆ.

ಅಲ್ಲದೇ ಸರ್ಕಾರದ ವತಿಯಿಂದ ಮೃತರಿಗೆ ಪರಿಹಾರ ನಿಧಿ ಘೋಷಿಸಲಾಗಿದ್ದು, ಗುರುತು ಪತ್ತೆ ಕಾರ್ಯಾಚರಣೆ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

Leave A Reply