ಶಿವ ಸನ್ನಿಧಿಗಳಲ್ಲಿ ಸೇವಾ ಸಂಗಮ-ಅಶಕ್ತರ ಬಾಳಿಗೆ ಹರಿದು ಬಂತು ನೆರವು!! | ಯುವಶಕ್ತಿ ಸೇವಾ ಪಥದ ಕಾರ್ಯಕ್ಕೆ ವ್ಯಕ್ತವಾಗಿದೆ ಮೆಚ್ಚುಗೆ

Share the Article

ಯುವಶಕ್ತಿ ಸೇವಾಪಥ ಈಗಾಗಲೇ ದಕ ಜಿಲ್ಲೆಯಲ್ಲಿ ಹಲವಾರು ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಇದೀಗ ಯುವಶಕ್ತಿ ಸೇವಾಪಥದ ವತಿಯಿಂದ ಶಿವಸನ್ನಿಧಿಗಳಲ್ಲಿ ಸೇವಾ ಸಂಗಮದಡಿಯಲ್ಲಿ ಹಣ ಸಂಗ್ರಹಿಸಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ಸಹಾಯ ಹಸ್ತ ಚಾಚಿದೆ.

ಉಪ್ಪಿನಂಗಡಿ ಕಡೆಮಖೆಯಲ್ಲಿ ವಿಶೇಷ ವೇಷ ಧರಿಸಿ ಸೇವಾಸಂಗಮ ಎಂಬ ಯೋಜನೆಯಡಿ ವಿಶೇಷ ಬೃಹತ್ ವೇಷ ಧರಿಸಿ ಸಹೃದಯಿ ದಾನಿಗಳಿಂದ 1,20,000 ಮೊತ್ತ ಸಂಗ್ರಹಿಸಲಾಗಿದೆ. ಸಂಗ್ರಹ ಮಾಡಿದ ಹಣವನ್ನು ಹೃದಯಸಂಬಂಧಿತ ಕಾಯಿಲೆಯಿಂದ ಬಳಲುತ್ತಿರುವ ಧರ್ಮಸ್ಥಳದ ಬೇಬಿ ದೀಪಾ ಹಾಗೂ ಕಿಡ್ನಿ ವೈಫಲ್ಯದಿಂದ ಹೆಚ್ವಿನ ಚಿಕಿತ್ಸೆಗಾಗಿ ಉಪ್ಪಿನಂಗಡಿಯ ಯಕ್ಷ ಎಂಬ ಮಕ್ಕಳಿಗೆ ಸಹಸ್ರಲಿಂಗೇಶ್ವರ ಕ್ಷೇತ್ರದಲ್ಲಿ ವ್ಯವಸ್ಥಾಪನಾ ಸಮಿತಿಯ ಪ್ರಮುಖರ ಸಮಕ್ಷಮದಲ್ಲಿ ತಲಾ 60,000ರೂ. ಮೊತ್ತ ಹಸ್ತಾಂತರಿಸಲಾಯಿತು.

ಉಪ್ಪಿನಂಗಡಿ ಯೋಜನೆಯಲ್ಲಿ ಟೀಂ ಎಸ್ ವಿ ಕೆ ಉಪ್ಪಿನಂಗಡಿ, ಸೇವಾಜಾಗರಣ ಉಪ್ಪಿನಂಗಡಿ, ಯುವಸ್ಪಂದನ ಪೆರ್ನೆ,ಯುವಕೇಸರಿ ಗಡಿಯಾರ, ಯುವಶಕ್ತಿ ಕಡೇಶಿವಾಲಯ(ರಿ), ಯುವಸ್ಪಂದನ ಟ್ರಸ್ಟ್(ರಿ) ನೆಲ್ಯಾಡಿ, ಶ್ರೀಶಾರದಾ ಫ್ರೆಂಡ್ಸ್ ಸರ್ಕಲ್(ರಿ) ಸಜಿಪ, ಸತ್ಯದೇವತಾ ಯುವಕಸಂಘ ಕಂಚಿಲ ಸಜಿಪ, ಟೀಂ ಕಳೆಂಜ ಗ್ರಾಮಸ್ಥರು, ಹಾಗೂ ಇನ್ನಿತರರ ಸಹಯೋಗವಿದ್ದು ಟೀಂ‌ ಎಸ್ ಆರ್ ಕೆ ನಾಸಿಕ್ ವಾದನ ದ ಮೂಲಕ ಮೆರುಗು ನೀಡಿತು.

ಅದೇ ರೀತಿ ಕಾರಿಂಜ ಕ್ಷೇತ್ರದಲ್ಲಿ ರುದ್ರಗಿರಿಯ ಸೇವಾಸಿರಿ ಎಂಬ ಹೆಸರಿನಡಿಯಲ್ಲಿ ಶಿವಪಾರ್ವತಿ ಬೇಟಿ ಉತ್ಸವದ‌ಂದು ಸಂಗ್ರಹಿಸಲ್ಪಟ್ಟ 80,000 ಮೊತ್ತದಲ್ಲಿ ರೂ.60,000 ರೂ.ಗಳನ್ನು ರಕ್ತದದೊತ್ತಡದಿಂದ ಬಿದ್ದು ತಲೆಗೆ ಏಟಾಗಿ ಆಸ್ಪತ್ರೆಯಲ್ಲಿರುವ ವಿಜಯ ಆಚಾರ್ಯರವರ ತುರ್ತು ಚಿಕಿತ್ಸೆಗಾಗಿ ಕಾರಿಂಜ ಸನ್ನಿಧಿಯಲ್ಲಿ ಹಸ್ತಾಂತರಿಸಲಾಯಿತು.

ಈ ಯೋಜನೆಯಲ್ಲಿ ಗೆಳೆಯರ ಬಳಗ ಆರಿಕಲ್ಲು, ಶಿವಛತ್ರಪತಿ ಫ್ರೆಂಡ್ಸ್ ಬಡೆಕೊಟ್ಟು,ಅಯೋಧ್ಯಾ ಫ್ರೆಂಡ್ಸ್ ಬಿ.ಸಿ ರೋಡ್,ರಾಮ್ ಫ್ರೆಂಡ್ಸ್ ರಿ ಕಟೀಲ್, ದುರ್ಗಾ ಸೇವಾ ಬಳಗ ಅಮ್ಟಾಡಿ ಸಾಥ್ ನೀಡಿದ್ದು ಕೆ.ಎಫ್.ಎಮ್ ನಾಸಿಕ್ ವಾದನದ ಮೂಲಕ ಸಹಕರಿಸಿದ್ದರು.

Leave A Reply