ಮಾನಸಿಕ ಅಸ್ವಸ್ಥ ಮಗುವಿಗೂ ಪಿಂಚಣಿ ಸೌಲಭ್ಯ : ಕೇಂದ್ರ ಸರಕಾರದಿಂದ ಮಹತ್ವದ ಘೋಷಣೆ

ನವದೆಹಲಿ : ಕೇಂದ್ರ ಸರಕಾರವು ಇತ್ತೀಚೆಗೆ ಮಾನಸಿಕ ಅಥವಾ ದೈಹಿಕ ವಿಕಲಾಂಗತೆಯಿಂದ ಬಳಲುತ್ತಿರುವ ಮಕ್ಕಳು ಅಥವಾ ಒಡ ಹುಟ್ಟಿದವರಿಗೆ ಕುಟುಂಬ ಪಿಂಚಣಿ ನೀಡುವ ಆದಾಯದ ಮಾನದಂಡವನ್ನು ಹೆಚ್ಚಿಸಲು ನಿರ್ಧರಿಸಿದೆ. ಇಷ್ಟು ಮಾತ್ರವಲ್ಲದೇ ಮಾನಸಿಕ ಅಸ್ವಸ್ಥ ಮಗು ಕೂಡ ಕುಟುಂಬ ಪಿಂಚಣಿ ಪಡೆಯಲು ಅರ್ಹ ಎಂದು ಸರಕಾರ ಸ್ಪಷ್ಟವಾಗಿ ಹೇಳಿದೆ.

ಕೇಂದ್ರ ಸರಕಾರವು ತನ್ನ ಲಕ್ಷಗಟ್ಟಲೆ ನೌಕರರು ಮತ್ತು ಪಿಂಚಣಿದಾರರ ಹಿತದೃಷ್ಟಿಯಿಂದ ಅನೇಕ ನಿಯಮಗಳನ್ನು ತಿದ್ದುಪಡಿ ಮಾಡ್ತಾ ಇರುವುದರಿಂದ ಇದರ ಅಡಿಯಲ್ಲಿ ಸರಕಾರಿ ನೌಕರರು ಮತ್ತು ನಿವೃತ್ತ ನೌಕರರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸುವುದರ ಜೊತೆಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

ದಿವಂಗತ ಸರಕಾರಿ ನೌಕರನ ಮಾನಸಿಕ ಅಸ್ವಸ್ಥ ಮಗು ಕೂಡಾ ಕುಟುಂಬ ಪಿಂಚಣಿ ಪಡೆಯಲು ಅರ್ಹ ಎಂದು ಕೇಂದ್ರ‌ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. ಮಾನಸಿಕ ಅಸ್ವಸ್ಥ ಮಕ್ಕಳಿಗೆ ಬ್ಯಾಂಕ್ ಗಳು ಕುಟುಂಬ ಪಿಂಚಣಿ ನೀಡುತ್ತಿಲ್ಲ. ಇದಕ್ಕಾಗಿ ನ್ಯಾಯಾಲಯಗಳಿಗೆ ಪೋಷಕರಿಂದ ಪತ್ರ ತರಲು ಕೋರುತ್ತಿದ್ದೇವೆ ಎಂದು ಹೇಳಿದರು.

ಮಾನಸಿಕ ಅಸಾಮರ್ಥ್ಯವನ್ನು ಎದುರಿಸುತ್ತಿರುವ ಅವಲಂಬಿತ ಮಗುವಿನಿಂದ ಪಿಂಚಣಿಗಾಗಿ ರಕ್ಷಕ ಪತ್ರವನ್ನು ಕೇಳುವುದು ನಾಮಿನಿಯ ಸಂಪೂರ್ಣ ವ್ಯಾಯಾಮವನ್ನು ರದ್ದುಗೊಳಿಸುತ್ತದೆ.

2021 ರಲ್ಲಿ ಕೇಂದ್ರ ನಾಗರಿಕ ಸೇವಾ ಪಿಂಚಣಿ ನಿಯಮಗಳನ್ನು ಉಲ್ಲಂಘಿಸುತ್ತದೆ ಬ್ಯಾಂಕ್ ಗಳು ಎಂದು ಹೇಳಿದರು. ‌

ಪಿಂಚಣಿ ವಿತರಿಸುವ ಎಲ್ಲಾ ಬ್ಯಾಂಕ್ ಗಳ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಈ ಬಗ್ಗೆ ಅಗತ್ಯ ಸೂಚನೆ ನೀಡಲು ಸೂಚಿಸಲಾಗಿದೆ‌.

Leave A Reply

Your email address will not be published.