

ಬೆಳ್ತಂಗಡಿ ತಾಲೂಕಿನ ಕಾಯರ್ತಡ್ಕದ ಬೀಜದಡಿ ಎಂಬಲ್ಲಿ ಅಕ್ರಮ ಗೋಸಾಗಾಟ ನಡೆದಿದೆ. ಆದರೆ ವಿಹೆಚ್ ಪಿ ಮತ್ತು ಬಜರಂಗದಳದಿಂದ ನಡೆದ ಮಿಂಚಿನ ದಾಳಿ ಸಂದರ್ಭ ಕಳ್ಳ ಸಾಗಾಣಿಕೆ ಪತ್ತೆ ಆಗಿದ್ದು, ವಾಹನಕ್ಕೆ ತಡೆ ಬಿದ್ದಿದೆ.
ಅಲ್ಲಿನ ರವೀಂದ್ರ ಪುತ್ಯೆ ಎಂಬವರ ವಾಹನದಲ್ಲಿ ದನ ತುಂಬಿಸಿಕೊಂಡು ಹೋಗಲಾಗುತ್ತಿತ್ತು. ಬೇರೆ ಕಸಾಯಿಖಾನೆಗೆ ಕಾಯರ್ತಡ್ಕದಿಂದ ಗೋಸಾಗಾಟವನ್ನು ವಿಹೆಚ್ ಪಿ ಬಜರಂಗದಳ ನಡೆಸಿದ ಜಂಟಿ ಮಿಂಚಿನ ದಾಳಿ ನಡೆಸಿ ವಿಫಲಗೊಳಿಸಿವೆ.
ಆ ಸಂದರ್ಭ ರವೀಂದ್ರ ಪುತ್ಯೆ ಮತ್ತೆ ಶ್ರೀಧರ ಪಂಚಮಿ ಪಾದೆ ಎಂಬ ಆರೋಪಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ.













