Indian Railway : ಮರದ ವಿಚಾರದಲ್ಲಿ ಯಾಮಾರಿ 1 ಕೋಟಿ ಕಳೆದುಕೊಂಡ ಭಾರತೀಯ ರೈಲ್ವೆ!!

Indian Railway : ಭಾರತೀಯ ರೈಲ್ವೆ ಭೂ ಸ್ವಾದೀನ ಪ್ರಕ್ರಿಯೆಯಲ್ಲಿ ಯಾಮಾರಿ ಒಂದು ಕೋಟಿ ರೂಪಾಯಿ ಕಳೆದುಕೊಂಡಿರುವ ಅಚ್ಚರಿ ಘಟನೆ ಒಂದು ನಡೆದಿದೆ.

ಹೌದು, ಮಹಾರಾಷ್ಟ್ರದ ಯಾವತ್ಮಲ್ ಜಿಲ್ಲೆಯಲ್ಲಿನ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಭಾರತೀಯ ರೈಲ್ವೆ ರಕ್ತಚಂದನ ಎಂದು ಭಾವಿಸಿ ಒಂದು ಮರಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡಿತ್ತು. ಆದರೆ, ಆ ಮರ ಬಿಜಸಲ್ ಮರ ಎಂದು ಪರೀಕ್ಷೆಯಲ್ಲಿ ತಿಳಿದುಬಂದಿದ್ದು, ರೈಲ್ವೆ ಈಗ ಹಣ ವಾಪಸ್ ಪಡೆಯಲು ನ್ಯಾಯಾಲಯದ ಮೊರೆ ಹೋಗಿದೆ.
ಅಂದಹಾಗೆ ತುಕಾರಾಮ್ ಶಿಂಧೆ ಅವರ ಭೂಮಿಯನ್ನು 2018ರಲ್ಲಿ ಸ್ವಾಧೀನಪಡಿಸಿಕೊಂಡಿತ್ತು. ಈ ವೇಳೆ ವಾರ್ಧಾ-ಯವತ್ಮಾಲ್-ಪುಸಾದ್-ನಾಂದೇಡ್ ಮಾರ್ಗದ ಕಾಮಗಾರಿ ನಡೆಯುತ್ತಿತ್ತು. ಕೇಶವ್ ಜಮೀನಿನಲ್ಲಿರುವ ಮರವನ್ನು ದುಬಾರಿ ಮೌಲ್ಯದ ರಕ್ತಚಂದನ ಎಂದು ಗುರುತಿಸಲಾಗಿತ್ತು. ಈ ಮರಕ್ಕೆ ಮಧ್ಯಂತರ ಪರಿಹಾರವಾಗಿ 1 ಕೋಟಿ ರೂ. ನೀಡಬೇಕೆಂದು ನ್ಯಾಯಾಲಯ ರೈಲ್ವೆ ಇಲಾಖೆಗೆ ಆದೇಶಿಸಿತ್ತು. ಅಂತೆಯ ರೈಲ್ವೆ ಇಲಾಖೆಗೆ ಹಣವನ್ನು ಕೂಡ ನೀಡಿತ್ತು.
ಆದರೆ ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ಈ ಮರದ ತುಂಡನ್ನು ಬೆಂಗಳೂರು ಮೂಲದ ಇನ್ಸ್ಟಿಟ್ಯೂಟ್ ಆಫ್ ವುಡ್ ಸೈನ್ಸ್ ಆಂಡ್ ಟೆಕ್ನಾಲಜಿಗೆ ಕಳುಹಿಸಲಾಗಿತ್ತು. ಈ ಪರೀಕ್ಷೆಯಲ್ಲಿ ಇದು ರಕ್ತಚಂದನ ಅಲ್ಲ, ಅದು ಬಿಜಸಲ್ ಮರ ಎಂದು ತಿಳಿದು ಬಂದಿದೆ. ಇದು ಸಾಮಾನ್ಯವಾದ ಮರವಾಗಿದ್ದು, ಇದರ ಮೌಲ್ಯ 10,981 ರೂಪಾಯಿ ಆಗಿತ್ತು. ಇದೀಗ ರೈಲ್ವೆ ಇಲಾಖೆ ಈ ವರದಿಯನ್ನು ಆಧಾರವಾಗಿಟ್ಟುಕೊಂಡು ಬಾಂಬೆ ಹೈಕೋರ್ಟ್ನ ನಾಗ್ಪುರ ಪೀಠದ ಮುಂದೆ ಹೋಗಿದೆ.
Comments are closed.