Dharmasthala Case: ಮೊದಲ ಪಾಯಿಂಟ್ ಉತ್ಖನನದಲ್ಲಿ ಏನೂ ಸಿಗದ ಹಿನ್ನೆಲೆ, 2ನೇ ಗುರುತಿನಲ್ಲಿ ಉತ್ಖನನ

Dharmasthala Case: ಧರ್ಮಸ್ಥಳ ಕೇಸ್ ಭಾರೀ ಕುತೂಹಲ ಮೂಡಿಸುತ್ತಿದ್ದು, 20 ವರ್ಷಗಳ ಹಿಂದಿನ ಸಮಾಧಿ ರಹಸ್ಯ ಬಯಲಾಗುತ್ತಾ ಎಂದು ಜನರಲ್ಲಿ ಮೂಡಿದೆ. ಈಗಾಗಲೇ ಮಾಸ್ಕ್ಮ್ಯಾನ್ ತೋರಿಸಿದ ಜಾಗದಲ್ಲಿ ಉತ್ಖನನ ಕಾರ್ಯ ನಡೆಯುತ್ತಿದೆ. ಉತ್ಖನನ ಕಾರ್ಯ ಪ್ರಾರಂಭವಾಗುತ್ತಿದ್ದಂತೆ ದಟ್ಟ ಕಾಡಿನಲ್ಲಿ ಸಮಾಧಿ ರಹಸ್ಯ ಹೊರಬರುವ ಕುತೂಹಲ ಜನರಲ್ಲಿ ಮೂಡಿದೆ.

ಇದರ ಜೊತೆಗೆ ಇದೀಗ ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೊದಲ ಗುರುತಿನ ಉತ್ಖನನದಲ್ಲಿ ಏನೂ ದೊರಕ್ಕಿಲ್ಲ ಎಂದು ವರದಿಯಾಗಿದೆ. ಎರಡು ಮತ್ತು ಮೂರು ಗುರುತಿನ ಉತ್ಖನನಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ ಎನ್ನಲಾಗಿದೆ. ಜನರಲ್ಲಿ ಕುತೂಹಲದ ಜತೆ ಆತಂಕ. ಸೃಷ್ಟಿಯಾಗಿದ್ದು, ಮೊದಲ ಪಾಯಿಂಟ್ ನಲ್ಲಿ ಏನೂ ಸಿಕ್ಕಿಲ್ಲವಂತೆ ಅನ್ನುವ ಮಾತು ಹರಿದಾಡುತ್ತಿದೆ.
ಮಾಸ್ಕ್ಮ್ಯಾನ್ ಮಾಡಿರುವ ಆರೋಪ ರಾಜ್ಯದಲ್ಲಿ ಭಾರೀ ಸಂಚಲನ ಉಂಟು ಮಾಡಿದ್ದು, ಈತ ಮಾಡುತ್ತಿರುವ ಆರೋಪ, ಸತ್ಯನಾ, ಸುಳ್ಳಾ ಅನ್ನೋದು ಸೂಕ್ತ ತನಿಖೆಯ ಮೂಲಕ ಹೊರಗೆ ಬರಲಿದೆ.
Comments are closed.