Actor Darshan: ನಟ ದರ್ಶನ್ಗೆ ಶಾಕಿಂಗ್ ನ್ಯೂಸ್

Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ಗೆ ಸ್ವಿಟ್ಜರ್ಲ್ಯಾಂಡ್ ವೀಸಾ ನೀಡಲು ನಿರಾಕರಿಸಿದೆ ಎಂದು ವರದಿಯಾಗಿದೆ. ನಿನ್ನೆ ಬೆಂಗಳೂರಿನ 64 ನೇ ಸಿಸಿಹೆಚ್ ಕೋರ್ಟ್ನಲ್ಲಿ ನಟ ದರ್ಶನ್ ವಿಚಾರಣೆಗೆ ಹಾಜರಾಗಿದ್ದರು.
ಮೂಲಗಳ ಪ್ರಕಾರ ಸ್ವಿಟ್ಜರ್ಲ್ಯಾಂಡ್ ದರ್ಶನ್ಗೆ ವೀಸಾ ನಿರಾಕರಿಸಿದೆ ಎಂದು ವರದಿಯಾಗಿದೆ. ನಟ ದರ್ಶನ್ ಡೆವಿಲ್ ಸಿನಿಮಾ ಶೂಟಿಂಗ್ಗೆಂದು ಯುರೋಪ್ ತೆರಳುವ ಉದ್ದೇಶದಲ್ಲಿದ್ದರು. ರೇಣುಕಾಸ್ವಾಮಿ ಕೊಲೆ ಪ್ರಕರಣ ಕೋರ್ಟ್ನಲ್ಲಿರುವ ಹಿನ್ನೆಲೆ, ಕ್ರಿಮಿನಲ್ ಬ್ಯಾಗ್ರೌಂಡ್ ಹಿನ್ನೆಲೆ ವೀಸಾ ನೀಡಲು ಸ್ವಿಟ್ಜರ್ಲ್ಯಾಂಡ್ ನಿರಾಕರಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ನಟ ದರ್ಶನ್ಗೆ ಯುರೋಪ್ಗೆ ಪ್ರವೇಶ ನಿಷೇಧ ಮಾಡಲಾಗಿದೆ.
Comments are closed.