Ujire: ಉಜಿರೆ: ಯುವಕ ನಿಧನ!

Ujire: ಲಾಯಿಲ ಗ್ರಾಮದ ವಿವೇಕಾನಂದ ನಗರದ ಸೋಮಣ್ಣ ಕುಂಬಾರ ಎಂಬವರ ಪುತ್ರ ಸಂದೀಪ್ ಕುಲಾಲ್ (28) ಎಂಬವರು ಕಳೆದ ಕೆಲವು ದಿನಗಳ ಹಿಂದೆ ಜಾಂಡೀಸ್ ಬಂದಿದ್ದು, ಅದಕ್ಕೆ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದರು, ಅದರೆ ಕಳೆದ ಎರಡು ದಿನಗಳಿಂದ ಮತ್ತೆ ಜ್ವರ ಉಲ್ಬಣಗೊಂಡು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ವೃತ್ತಿಯಲ್ಲಿ ಅಲ್ಯೂಮಿನಿಯಂ ಪ್ಯಾಬ್ರಿಕೇಶನ್ ಕೆಲಸ ಮಾಡುತಿದ್ದ ಅವರು ಕಬಡ್ಡಿ ಆಟಗಾರರಾಗಿದ್ದಲ್ಲದೇ ಹಲವಾರು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ಗುರುತಿಸಿಕೊಂಡು ತುಂಬಾ ಕ್ರೀಯಶೀಲ ವ್ಯಕ್ತಿಯಾಗಿದ್ದರು.

ಮೃತರು ಪತ್ನಿ ಶ್ವೇತ, ಒಂದು ಗಂಡು ಮಗು, ತಂದೆ ಸೋಮ, ತಾಯಿ ರತ್ನ, ಸಹೋದರ ಸಂತೋಷ ಅವರನ್ನು ಅಗಲಿದ್ದಾರೆ.
Comments are closed.