Home News Haveri: ಶಿಗ್ಗಾವಿಯ ಗುತ್ತಿಗೆದಾರನ ಹತ್ಯೆ: ಆರೋಪಿ ಮನೆಗೆ ಬೆಂಕಿ ಹಚ್ಚಿದ ಕುಟುಂಬಸ್ಥರು

Haveri: ಶಿಗ್ಗಾವಿಯ ಗುತ್ತಿಗೆದಾರನ ಹತ್ಯೆ: ಆರೋಪಿ ಮನೆಗೆ ಬೆಂಕಿ ಹಚ್ಚಿದ ಕುಟುಂಬಸ್ಥರು

Hindu neighbor gifts plot of land

Hindu neighbour gifts land to Muslim journalist

Haveri: ಶಿಗ್ಗಾವಿಯ ಸ್ಥಳೀಯ ಗುತ್ತಿಗೆದಾರ ಶಿವಾನಂದ್ ಕುನ್ನೂರ್ ಹತ್ಯೆ ಯ ನಂತರ, ಆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿಯ ಮನೆಗೆ ಕುಟುಂಬದ ಸದಸ್ಯರು ಬೆಂಕಿ ಹಚ್ಚಿದ್ದಾರೆ ಎಂದು ಬುಧವಾರ ತಿಳಿದು ಬಂದಿದೆ.

ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ. ಈ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಮಂಗಳವಾರ ಶಿಗ್ಗಾಂವಿ ಹೊರವಲಯದಲ್ಲಿ ಊಟ ಮಾಡಿ ಮನೆಗೆ ಹಿಂದಿರುಗುತ್ತಿದ್ದಾಗ ಹಾಡಹಗಲೇ ಪ್ರಥಮ ದರ್ಜೆ ಗುತ್ತಿಗೆದಾರ ಶಿವಾನಂದ್ ಕುನ್ನೂರ್ (40) ಅವರ ಮೇಲೆ ಬರ್ಬರವಾಗಿ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ.

ಕಬ್ಬಿಣದ ರಾಡ್‌ಗಳು, ಮಚ್ಚುಗಳು ಮತ್ತು ಕತ್ತಿಗಳನ್ನು ಹಿಡಿದ ದಾಳಿಕೋರರು ಅವರ ಕುತ್ತಿಗೆ ಮತ್ತು ತಲೆಯ ಮೇಲೆ ಪದೇ ಪದೆ ದಾಳಿ ನಡೆಸಿದ್ದಾರೆ. ಮತ್ತು ಈ ಕೃತ್ಯವು ಕೆಲವರ ಫೋನ್‌ನಲ್ಲಿ ರೆಕಾರ್ಡ್ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ

ಇದನ್ನೂ ಓದಿ:Kodagu Rain: ಕೊಡಗಿನಲ್ಲಿ ಭಾರಿ ಗುಡುಗು ಸಹಿತ ಮಳೆ – ತುಂಬಿ ಹರಿಯುತ್ತಿರುವ ನದಿ ತೊರೆಗಳು – ಹೆಚ್ಚಾದ KRS ಜಲಾಶಯದ ಒಳಹರಿವು