CM Yogi: ಲಂಚ ಕೇಳಿದರೆ, ಅವರ ಮುಂದಿನ ಪೀಳಿಗೆಗೆ ಸರ್ಕಾರಿ ಉದ್ಯೋಗ ಸಿಗಲ್ಲ: UP ಸಿಎಂ ಯೋಗಿ

CM Yogi: ಭ್ರಷ್ಟಾಚಾರದ(Corruption) ವಿರುದ್ಧ ಶೂನ್ಯ ಸಹಿಷ್ಣುತಾ ನೀತಿಯನ್ನು ಅಳವಡಿಸಿಕೊಂಡ ಉತ್ತರ ಪ್ರದೇಶ(Uttar Pradesh) ಸಿಎಂ ಯೋಗಿ ಆದಿತ್ಯನಾಥ್(CM Yogi Adityanath), ರಾಜ್ಯ ಸರ್ಕಾರ(Govt) ಭ್ರಷ್ಟಾಚಾರ ಮತ್ತು ಭ್ರಷ್ಟಾಚಾರದ ಆರೋಪ ಹೊತ್ತಿರುವವರ ಮೇಲೆ ಯಾವುದೇ ಕರುಣೆ ಹೊಂದಲು ಸಾಧ್ಯವಿಲ್ಲ ಎಂದರು. “ಯಾರಾದರೂ ನಿಮ್ಮಿಂದ ಲಂಚ ಕೇಳಿದರೆ ಅದು ಅವರ ಕುಟುಂಬದ ಕೊನೆಯ ಸರ್ಕಾರಿ ಕೆಲಸವಾಗಿರುತ್ತದೆ. ಭವಿಷ್ಯದಲ್ಲಿ ಅವರ ಪೀಳಿಗೆಯ ಯಾರಿಗೂ ಸರ್ಕಾರಿ ಉದ್ಯೋಗ(Govt Job) ಸಿಗುವುದಿಲ್ಲ. ಏಕೆಂದರೆ, ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ, ಅದು ಒಂದು ಉದಾಹರಣೆಯಾಗಲಿದೆ” ಎಂದು ಅವರು ಹೇಳಿದರು.
https://x.com/i/status/1902657321895121043
ಯುವ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ, ಯಾರಾದರೂ ಎಲ್ಲಿಯಾದರೂ ಅಪ್ರಾಮಾಣಿಕವಾಗಿ ನಡೆದುಕೊಂಡರೆ, ನೀವು ಅದರ ಬಗ್ಗೆ ನನಗೆ ದೂರು ನೀಡಿ ಎಂದು ಹೇಳಿದರು. ಸರ್ಕಾರವು ಅಪರಾಧ ಮತ್ತು ಅಪರಾಧಿಗಳು, ಭ್ರಷ್ಟಾಚಾರ ಮತ್ತು ಭ್ರಷ್ಟ ಜನರ ಬಗ್ಗೆ ಶೂನ್ಯ ಸಹಿಷ್ಣುತಾ ನೀತಿಯಡಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಈಗಾಗಲೇ ಹೇಳಲಾಗಿದೆ.
ರಾಜ್ಯ ಸರ್ಕಾರಿ ಪೋರ್ಟಲ್ಗೆ ಹೋಗಿ, ಅಲ್ಲಿ ಅವರ ಬಗ್ಗೆ ದೂರು ನೀಡಿ. ಯಾರಾದರೂ ಅನಗತ್ಯವಾಗಿ ನಿಮ್ಮಿಂದ ಹಣ ಕೇಳಿದರೆ, ನಾವು ಅದನ್ನು ತನಿಖೆ ಮಾಡಿ ಅದನ್ನು ಸರಿ ದಾರಿಗೆ ತರುವ ಕೆಲಸವನ್ನು ಮಾಡುತ್ತೇವೆ ಎಂದು ಗಂಭೀರವಾಗಿ ಮುಖ್ಯಮಂತ್ರಿ ಯೋಗಿ ಎಚ್ಚರಿಕೆ ನೀಡಿದರು.
ಇದಕ್ಕೂ ಮೊದಲು, 2017 ರ ಮೊದಲು, ನಾನು ಉತ್ತರ ಪ್ರದೇಶದಲ್ಲಿ ಅಧಿಕಾರ ವಹಿಸಿಕೊಂಡಾಗ, ಉತ್ತರ ಪ್ರದೇಶ ಪೊಲೀಸ್ ಪಡೆಯಲ್ಲಿ ಎಷ್ಟು ಮಹಿಳೆಯರು ಕೆಲಸ ಮಾಡುತ್ತಿದ್ದಾರೆ ಎಂದು ಕೇಳಿದಾಗ, ಒಟ್ಟು ಸಂಖ್ಯೆ ಕೇವಲ 10,000 ಮಾತ್ರ ಎಂದು ಮುಖ್ಯಮಂತ್ರಿ ಹೇಳಿದರು. ಈಗ ಯಾವುದೇ ನೇಮಕಾತಿ ನಡೆದರೂ, ಕನಿಷ್ಠ 20 ಪ್ರತಿಶತದಷ್ಟು ನೇಮಕಾತಿ ಹುಡುಗಿಯರಿಂದ ಆಗಿರಬೇಕು ಎಂದು ನಾವು ನಿರ್ಧರಿಸಿದ್ದೇವೆ. ಇತ್ತೀಚೆಗೆ ನಡೆದ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಹೆಚ್ಚಿನ ಸಂಖ್ಯೆಯ ಹುಡುಗಿಯರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದರು.
Comments are closed.