Black Magic: ಅಂತ್ಯಸಂಸ್ಕಾರ ಮಾಡಿದ್ದ ಮಗು ಮರುದಿವಸ ಮರದಲ್ಲಿ ಪ್ರತ್ಯಕ್ಷ!
![Black Magic](https://hosakannada.com/wp-content/uploads/2024/07/IMG_20240701_141737-1.jpg)
Black Magic: ಕೆಲವೊಂದು ಘಟನೆಗಳು ನಮ್ಮ ಊಹೆಗೂ ನಿಲುಕದೆ ಇರುತ್ತದೆ. ಹಾಗೆಯೇ ಇಲ್ಲೊಂದು ಕಡೆ ಅನಾರೋಗ್ಯದಿಂದ ಮೃತಪಟ್ಟಿದ್ದ ಮಗುವನ್ನು ಅಂತ್ಯಸಂಸ್ಕಾರ ಮಾಡಲಾಗಿತ್ತು. ಆದರೆ ಮಗು ಬೆಳಗಾಗುವಷ್ಟರಲ್ಲಿ ಮರದಲ್ಲಿ ಪ್ರತ್ಯಕ್ಷವಾದ ಆಶ್ಚರ್ಯಕರ ಘಟನೆ ಬೆಳಕಿಗೆ ಬಂದಿದೆ.
ಹೌದು, ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದ ಅಂಬಯ್ಯ ಸ್ವಾಮಿ ಎಂಬವರ ಒಂದೂವರೆ ವರ್ಷದ ಮೃತ ಪಟ್ಟಿರುವ ಮಗುವನ್ನು ಅಂತ್ಯಸಂಸ್ಕಾರ ಮಾಡಿದ್ದು, ಮಗು ಮರು ದಿವಸ ಮರದ ಮೇಲೆ ಪತ್ತೆಯಾಗಿದೆ.
ಮರದ ಮೇಲೆ ಜೋತು ಬೀಳುತ್ತಿರುವ ದೃಶ್ಯ ಕಂಡು ಗ್ರಾಮಸ್ಥರು ಜೋಳಿಗೆ ಹೊರ ತೆಗೆದು ನೋಡಿದಾಗ ಕಪ್ಪು ಬಟ್ಟೆಯಲ್ಲಿ ಮಗುವನ್ನು ಸುತ್ತಿ ಮರಕ್ಕೆ ಕಟ್ಟಿ ಜೋಳಿಗೆಯಲ್ಲಿ ನೇತು ಹಾಕಲಾಗಿತ್ತು. ಸದ್ಯ ದಫನ ಮಾಡಿದ ಮಗುವನ್ನು ಮತ್ತೆ ತೆಗೆದು ಮಾಟ ಮಂತ್ರ ಪ್ರಯೋಗ (Black Magic) ಬಳಸಿ ಈ ರೀತಿ ಮಾಡಲಾಗಿದೆ ಎಂಬುದು ಗ್ರಾಮಸ್ಥರ ಶಂಕೆಯಾಗಿದೆ. ಸದ್ಯ ಮರಕ್ಕೆ ಕಟ್ಟಿದ್ದ ಮಗುವಿನ ಮೃತದೇಹವನ್ನು ಮತ್ತೆ ಅದೇ ಸ್ಥಳದಲ್ಲಿ ವಿಧಿ ವಿಧಾನದಂತೆ ಗ್ರಾಮಸ್ಥರು ಅಂತ್ಯಸಂಸ್ಕಾರ ಮಾಡಿದ್ದಾರೆ.
Relationship: ಮದುವೆಯಾಗಿ ವರ್ಷ ಕಳೆದ್ರು ಫಸ್ಟ್ನೈಟ್ಗೆ ಒಪ್ಪದ ಪತಿ! ಕೊನೆಗೂ ಬಯಲಾಯ್ತು ರಹಸ್ಯ!