Darshan Matter: ದರ್ಶನ್ ವಿಚಾರವಾಗಿ ಸುಮಲತಾ, ರಾಕ್ ಲೈನ್ ಮೌನವೇಕೆ ?! ಅಚ್ಚರಿ ಹೇಳಿಕೆ ಕೊಟ್ಟ ಸಾರಾ ಗೋವಿಂದ್
![Darshan Matter](https://hosakannada.com/wp-content/uploads/2024/06/IMG-20240630-WA0016.jpg)
Darshan Matter: ನಟ ದರ್ಶನ್ ಕೊಲೆ ವಿಚಾರ ಇಂದು ರಾಜ್ಯದಲ್ಲಿ ಸದ್ದುಮಾಡುತ್ತಿದ್ದೆ. ಇದರ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ವಿವರ ನೀಡುವ ಅಗತ್ಯವಿಲ್ಲ. ಆದರೆ ಅಚ್ಚರಿ ಏನಂದ್ರೆ ಇಷ್ಟೆಲ್ಲಾ ಆದರೂ ಕೂಡ ನನ್ನ ಮಗ, ನನ್ನ ಎರಡನೇ ಮಗ ಎಂದು ಹೇಳಿಕೊಂಡು ಓಡಾಡುತ್ತಿದ್ದ ಸುಮಲತಾ ಅಂಬರೀಷ್(Sumalatha Ambarish) ಮಾತ್ರ ಇದುವರೆಗೂ ಈ ಬಗ್ಗೆ ಮಾತನಾಡಿಲ್ಲ. ಅತ್ಯಾಪ್ತ ರಾಕ್ ಲೈನ್ ವೆಂಕಟೇಶ್(Rock Line Venktesh) ಕೂಡ. ದರ್ಶನ್ ನನ್ನು ಭೇಟಿ ಕೂಡ ಮಾಡಲಿಲ್ಲ. ಹೀಗಾಗಿ ದರ್ಶನ್ ವಿಚಾರವಾಗಿ ಇವರಿಬ್ಬರ ಈ ಮೌನವೇಕೆ? ಎಂಬ ಪ್ರಶ್ನೆ ಎದುರಾಗಿದೆ.
ಹೌದು, ಸದ್ಯ ಕನ್ನಡಿಗರನ್ನು ಬಹುವಾಗಿ ಕಾಡಿದ ಪ್ರಶ್ನೆ ಇದು. ತಾಯಿ-ಮಗನಂತೆ ಇದ್ದು ದರ್ಶನ್- ಸುಮಲತಾ ಎಲ್ಲರಿಗೂ ಮಾದರಿಯಾಗಿದ್ರು. ಆದರೆ ಮಗ ಜೈಲುಪಾಲಾದರೂ ತಾಯಿಯ ಮನಸ್ಸು ಮರುಗಲಿಲ್ಲವೇ? ಹೊರ ತರುವ ಪ್ರಯತ್ನ ನಡೆಯಲಿಲ್ಲವೇ? ಹೋಗಲಿ ಬಂದು ಭೇಟಿಯಾದರೂ ಮಾಡಬಹುದಲ್ಲವೇ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿವೆ. ಇದೀಗ ಈ ಮೌನ ಏಕೆ ಎಂಬ ಪ್ರಶ್ನೆಗೆ ನಿರ್ಮಾಪಕ ಸಾರಾ ಗೋವಿಂದು(Sa Ra Govind) ಮಾತನಾಡಿದ್ದಾರೆ.
ಸಾರಾ ಗೋವಿಂದ್ ಹೇದ್ದೇನು?
ಈ ವಿಚಾರವಾಗಿ ಮೊದಲು ಮುಂದೆ ಬರಬೇಕಾಗಿದ್ದು ಕಲಾವಿದರ ಸಂಘ. ಎಲ್ಲರಿಗೂ ನೋವಿದೆ. ಆದರೆ, ಬಹಿರಂಗವಾಗಿ ಹೇಳಿಕೊಳ್ಳಲು ಮುಜುಗರ ಪಡುತ್ತಿದ್ದಾರೆ. ಇಡೀ ಚಿತ್ರರಂಗ ಸೇರಬೇಕು. ಎಲ್ಲರೂ ಒಟ್ಟಾಗಿ ಮುಂದೆ ಬರಬೇಕು. ಮೊದಲೇ ರಾಕ್ಲೈನ್ ಬಂದಿದ್ದರೆ ಸಮಸ್ಯೆ ಬಗೆಹರಿಯುತ್ತಿತ್ತು ಎಂದಿದ್ದಾರೆ ಸಾರಾ ಗೋವಿಂದ್.
Siddaramaiah-Narendra Modi: ಪ್ರಧಾನಿ ಮೋದಿಯನ್ನು ಭೇಟಿಯಾದ ಸಿಎಂ -ಡಿಸಿಎಂ, ಇಟ್ಟು ಬೇಡಿಕೆಗಳೇನು?