Election Result: ಡಿ.ಕೆ.ಸುರೇಶ್‌ಗೆ ಸತತ ಹಿನ್ನಡೆ; ಡಾ.ಮಂಜುನಾಥ್‌ ಮುಖದಲ್ಲಿ ಗೆಲುವಿನ ನಗೆ; ಕ್ಷೇತ್ರದಲ್ಲಿ ಭದ್ರತೆ ಹೆಚ್ಚಳ

Share the Article

Ramanagara Election Result: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್‌ ಬೆಂಬಲಿತ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್‌. ಮಂಜುನಾಥ್‌ ಅವರು 7 ನೇ ಸುತ್ತಿನಲ್ಲೂ ಮುನ್ನಡೆ ಸಾಧಿಸಿದ್ದು, ಕನಕಪುರ ಸೇರಿ ಕ್ಷೇತ್ರಾದ್ಯಂತ ಭದ್ರತೆ ಬಿಗಿಗೊಳಿಸಲಾಗುತ್ತಿದೆ.

ಕಾಂಗ್ರೆಸ್‌ ಅಭ್ಯರ್ಥಿ ಡಿ ಕೆ ಸುರೇಶ್‌ ಅವರು ಸತತ ಹಿನ್ನೆಡೆ ಸಾಧಿಸಿರುವ ಕಾರಣ ಕ್ಷೇತ್ರದಾದ್ಯಂತ ಹೆಚ್ಚಿನ ಭದ್ರತೆ ಒದಗಿಸಲಾಗುತ್ತಿದೆ. ಹೀಗಾಗಿ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ತಳಮಳ ಶುರುವಾಗಿದೆ. 50 ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆಯನ್ನು ಡಾ.ಮಂಜುನಾಥ್‌ ಕಾಯ್ದುಕೊಂಡಿದ್ದು, ಅತ್ಯಂತ ಕುತೂಹಲ ಮೂಡಿಸಿದೆ.

ಬೆಂಗಳೂರು ಗ್ರಾಮಾಂತರ ರಾಜ್ಯದಲ್ಲಿ ಅತ್ಯಂತ ಕುತೂಹಲ ಮೂಡಿಸಿದ ಕ್ಷೇತ್ರ. ಇದರ ಫಲಿತಾಂಶಕ್ಕೆ ಇಡೀ ದೇಶ ಕಾದುಕೊಂಡಿದೆ.

Leave A Reply