Mangaluru: ಪ್ರೇಯಸಿಯ ಆತ್ಮಹತ್ಯೆ ಬೆನ್ನಲ್ಲೇ ಪ್ರಿಯಕರನೂ ಆತ್ಮಹತ್ಯೆ

Mangaluru : ಪ್ರೇಯಸಿಯ ಆತ್ಮಹತ್ಯೆ ಬೆನ್ನಲ್ಲೇ ಪ್ರಿಯಕರನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಲ್ಕಿಯ ಅತಿಕಾರಿಬೆಟ್ಟು ಎಂಬಲ್ಲಿ ನಡೆದಿದೆ.ಅತಿಕಾರಿಬೆಟ್ಟಿನ ಕಾರ್ತಿಕ್‌ ಆತ್ಮಹತ್ಯೆ ಮಾಡಿಕೊಂಡಾತ.

ಇದನ್ನೂ ಓದಿ: Uddhav Thackeray : BJP ಅಧಿಕಾರಕ್ಕೆ ಬಂದ್ರೆ RSS ಬ್ಯಾನ್ – ಉದ್ಧವ್ ಠಾಕ್ರೆ !!

ಮೂಲ್ಕಿಯ ಪದವಿ ಪೂರ್ವ ಕಾಲೇಜಿನಲ್ಲಿ ಕಲಿಯುತ್ತಿದ್ದಾಗ ಅತಿಕಾರಿಬೆಟ್ಟಿನ ಕಾರ್ತಿಕ್‌ಗೆ ಮೂಡುಬಿದಿರೆಯ ಬಾಲಕಿ ಶರಣ್ಯಾ ಜತೆಗೆ ಪ್ರೇಮಾಂಕುರವಾಗಿತ್ತು.

ಇದನ್ನೂ ಓದಿ: Driving: ಪ್ರೇಯಸಿಯನ್ನು ತೊಡೆ ಮೇಲೆ ಕೂರಿಸಿ ಜಾಲಿ ರೈಡ್ ಮಾಡಿದ ಪ್ರಿಯಕರ

ಅಪ್ರಾಪ್ತರಾದ ಹಿನ್ನೆಲೆಯಲ್ಲಿ ವಿವಾಹಕ್ಕೆ ಅವಕಾಶವಾಗಿರಲಿಲ್ಲ. ಈ ನಡುವೆ ಮನೆಮಂದಿ ಮೂಲ್ಕಿಯ ಅಜ್ಜಿ ಮನೆಯಿಂದ ಕಾಲೇಜಿಗೆ ಹೋಗುತ್ತಿದ್ದ ಶರಣ್ಯಾಳನ್ನು ಮೂಡುಬಿದಿರೆಯ ಮನೆಗೆ ಕರೆದೊಯ್ದಿದ್ದರು.

ಬಳಿಕ ಕಾರ್ತಿಕ್‌ ಚಿತ್ರದುರ್ಗಕ್ಕೆ ತೆರಳಿದ್ದರು.ಅಲ್ಲಿ ಕೆಲವು ತಿಂಗಳಿನಿಂದ ಚಿತ್ರದುರ್ಗದ ಸಂಬಂಧಿಯೋರ್ವರ ಗ್ಯಾರೇಜ್‌ನಲ್ಲಿ ಮೆಕಾನಿಕ್‌ ಆಗಿ ದುಡಿಯುತ್ತಿದ್ದರು.

ಈ ಬೆಳವಣಿಗೆಯಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಶರಣ್ಯಾ ಶುಕ್ರವಾರ ಆತ್ಮಹತ್ಯೆಗೆ ಶರಣಾಗಿದ್ದರು. ಶನಿವಾರ ಊರಿಗೆ ಬಂದಿದ್ದ ಕಾರ್ತಿಕ್‌ ಕೂಡ ಈ ಘಟನೆಯಿಂದ ಮನನೊಂದು ಆತ್ಮಹತ್ಯೆ ಎಸಗಿದ್ದಾಮೆ.

ಈ ಕುರಿತು ಪ್ರಕರಣ ದಾಖಲಾಗಿದೆ.ಮೂಲ್ಕಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Leave A Reply

Your email address will not be published.