Ayodhya Special Perfume: ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಬರುವ ಭಕ್ತರನ್ನು ಸ್ವಾಗತಿಸಲು ವಿಶೇಷ ಸುಗಂಧ ದ್ರವ್ಯ!!!

Share the Article

Ayodhya: ರಾಮಮಂದಿರದಲ್ಲಿ ರಾಮಲಲ್ಲಾ ಪ್ರತಿಷ್ಠಾ ಸಮಾರಂಭಕ್ಕೆ ಇಡೀ ದೇಶ ಸಿದ್ಧಗೊಂಡಿದ್ದು, ರಾಮನ ಪ್ರಾಣ ಪ್ರತಿಷ್ಠೆಯನ್ನು ವೀಕ್ಷಿಸಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಲಿದ್ದಾರೆ. ಹಾಗಾಗಿ ದೇವಾಲಯ ಪ್ರವೇಶಿಸುವವರನ್ನು ವಿಶೇಷ ಸುಗಂಧ ದ್ರವ್ಯ ತನ್ನ ಪರಿಮಳದಿಂದ ಸ್ವಾಗತಿಸಲಿದ್ದಾರೆ. ಈ ಸುಗಂಧ ದ್ರವ್ಯ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ: Rahul Gandhi: ರಾಹುಲ್ ಪಾದಯಾತ್ರೆ ಸಂದರ್ಭ ಮೋದಿ, ಜೈ ಶ್ರೀರಾಮ್ ಘೋಷಣೆ: ಸಿಟ್ಟಿಗೆದ್ದು ರಾಹುಲ್ ಗಾಂಧಿ ಮಾಡಿದ್ದೇನು ಗೊತ್ತೇ??

ಉದ್ಯಮಿಯೊಬ್ಬರು ವಿಶೇಷವಾದ ಬರೇಲಿಯ ಸುಗಂಧ ದ್ರವ್ಯ ಮತ್ತು ಕುಂಕಮವನ್ನು ಸಿದ್ಧಪಡಿಸಿದ್ದಾರೆ. ಇದು ಸ್ಥಳದ ಪೂರ ಹರಡಲಿದೆ. ಅಯೋಧ್ಯೆಗೆ ಬರುವ ಪ್ರತಿ ಭಕ್ತರಿಗೆ ಈ ಸುಗಂಧ ದ್ರವ್ಯದ ಬಾಟಲಿಗಳು ಮತ್ತು ಧೂಪದ್ರವ್ಯವನ್ನು ಉಡುಗೊರೆಯಾಗಿ ಕೊಡಲಾಗುತ್ತದೆ. ಬರೇಲಿಯಿಂದ ಒಟ್ಟು 5000 ಸುಗಂಧ ಬಾಟಲಿಗಳು ಮತ್ತು 7000 ಕೇಸರಿ ಅಗರಬತ್ತಿಗಳನ್ನು ಕಳುಹಿಸಲಾಗಿದೆ.ರಾಮ ಜನಿಸಿದಾಗ, ದಶರಥ ಅವರು ಅಯೋಧ್ಯೆಯಾದ್ಯಂತ ಶ್ರೀಗಂಧ ಮತ್ತು ಕಸ್ತೂರಿಯನ್ನು ಸಿಂಪಡಿಸಿದ್ದರು ಎಂದು ಉಲ್ಲೇಖವಿದೆ. ಹಾಗಾಗಿ ನೈಸರ್ಗಿಕ ಸುಗಂಧವನ್ನು ಸೃಷ್ಟಿಸಲು ನಾವು ಸಹ ಅದೇ ಅಂಶ ಬಳಲಿ ತಯಾರಿಸಿದ್ದೇವೆ ಎಂದು ಉದ್ಯಮಿ ಗೌರವ್‌ ಮಿತ್ತಲ್‌ ಹೇಳಿದರು.

Leave A Reply