Karnataka Weather Updates: ಮಂಗಳೂರು; ಕರಾವಳಿಗರೇ ಎಚ್ಚರ, ಎಡೆಬಿಡದೆ ಸುರಿಯಲಿದ್ದಾನೆ ಮಳೆರಾಯ, ಚಂಡಮಾರುತ ಸಾಧ್ಯತೆ!!! ಯೆಲ್ಲೋ ಅಲರ್ಟ್ ಘೋಷಣೆ- IMD
dakshina kannada news mangalore heavy rain rain in coastal area

Rain in Karnataka: ಕರಾವಳಿ ಕರ್ನಾಟಕ (Coastal Karnataka) ಸೇರಿದಂತೆ ರಾಜ್ಯದಾದ್ಯಂತ ಭಾರೀ ಮಳೆಯಾಗುವ ಕುರಿತು ಹವಾಮಾನ ಇಲಾಖೆ (IMD) ಮಂಗಳವಾರ ಹೇಳಿದೆ. ಅರಬ್ಬಿ ಸಮುದ್ರದ ಲಕ್ಷದ್ವೀಪದ ಪ್ರದೇಶದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಹಾಗಾಗಿ ಚಂಡಮಾರುತವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆಯಿರುವುದರಿಂದ ಈ ಎಚ್ಚರಿಕೆಯನ್ನು ನೀಡಲಾಗಿದೆ. ಮಂಗಳೂರು ನಗರ ಸೇರಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಕಡೆ ಗುಡುಗು ಸಹಿತ ಮಳೆಯಾಗಿದೆ. ಹಾಗಾಗಿ ಕರಾವಳಿ ಪ್ರದೇಶದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
NMPA (ನವ ಮಂಗಳೂರು ಬಂದರು ಪ್ರಾಧಿಕಾರ)ಗೆ ಸುರಕ್ಷತಾ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ. ಚಂಡಮಾರುತ ಸಾಧ್ಯತೆ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದ್ದು, ಪರಿಣಾಮ ಎನ್ಎಂಪಿಎ ನಲ್ಲಿ ಕೆಲಸ ನಿಲ್ಲೋ ಸಾಧ್ಯತೆ ಇದೆ.
ಇದನ್ನು ಓದಿ: Firecracker Units Explosion: ಮತ್ತೊಂದು ಪಟಾಕಿ ದುರಂತ! ಪಟಾಕಿ ಮಳಿಗೆ ಭಸ್ಮಗೊಂಡು 9 ಮಹಿಳೆಯರು ಸೇರಿ 11 ಮಂದಿ ಮೃತ!