RBI New Rule: RBI ನಿಂದ ಬಂತೊಂದು ಹೊಸ ನಿಯಮ- ಕೂಡಲೇ ಇದೊಂದು ಕೆಲಸ ಮಾಡಿ , ಇಲ್ಲಾಂದ್ರೆ ನಿಮ್ಮ ಬ್ಯಾಂಕ್ ಖಾತೆ ಸ್ಥತಗಿತಗೊಳ್ಳೋದು ಪಕ್ಕಾ !!

Latest news intresting news new rule from RBI

RBI New Rule: RBI ನಿಂದ ಹೊಸ ನಿಯಮ (RBI New Rule) ಹೊರಬಿದ್ದಿದೆ. ಕೂಡಲೇ ಇದೊಂದು ಕೆಲಸ ಮಾಡಿ, ಇಲ್ಲಾಂದ್ರೆ ನಿಮ್ಮ ಬ್ಯಾಂಕ್ ಖಾತೆ ಸ್ಥತಗಿತಗೊಳ್ಳೋದು ಪಕ್ಕಾ !! ಹೌದು, ಸರ್ಕಾರದ ನಿಯಮಗಳನ್ನು ಸರಿಯಾಗಿ ಪಾಲಿಸದೆ ಇದ್ದರೆ ಬ್ಯಾಂಕಿನಲ್ಲಿ ಇರುವ ನಿಮ್ಮ ಖಾತೆಯನ್ನು ಕೂಡ ಕಳೆದುಕೊಳ್ಳಬೇಕಾಗುತ್ತದೆ ಜೊತೆಗೆ ನಿಮ್ಮ ಖಾತೆಯಲ್ಲಿ ಇರುವ ಹಣ ಕೂಡ ಹಿಂತಿರುಗಿ ಸಿಗದೇ ಇರಬಹುದು.

ಕೇಂದ್ರ ಸರ್ಕಾರದ (Central Govt) ಅಥವಾ ರಾಜ್ಯ ಸರ್ಕಾರದ (State Govt) ಯಾವುದೇ ಯೋಜನೆಯ ಫಲ ನಿಮಗೆ ಸಿಗಬೇಕು ನಿಮ್ಮ ಖಾತೆಗೆ ನೇರ ಹಣ ವರ್ಗಾವಣೆ ಆಗಬೇಕು ಎಂದಾದರೆ ನಿಮ್ಮ ಬ್ಯಾಂಕ್ ಖಾತೆ ಕೆವೈಸಿ ಪ್ರಕ್ರಿಯೆ ಮುಗಿಸಿರಲೇಬೇಕು. ಇ-ಕೆ ವೈ ಸಿ ಮಾಡಿಕೊಳ್ಳದೆ ಇರುವವರಿಗೆ ಆರ್‌ಬಿಐ (RBI) ಹೊಸದೊಂದು ರೂಲ್ಸ್ ಜಾರಿಗೆ ತಂದಿದೆ. ಆರ್‌ಬಿಐ (RBI) ಹೊಸ ಸುತ್ತೋಲೆ ಹೊರಡಿಸಿದ್ದು, ನೀವು ಎಲ್ಲ ಬ್ಯಾಂಕ್ಗಳಿಗೆ ಮರು ಕೆವೈಸಿ ಮಾಡಿಸಿಕೊಳ್ಳಲು ಸಾಧ್ಯವಿದೆ.

ಬ್ಯಾಂಕ್ಗಳಲ್ಲಿ ಗ್ರಾಹಕರು ತಮ್ಮ ಖಾತೆಗೆ ಪ್ಯಾನ್ ಕಾರ್ಡ್, ಫಾರ್ಮ್ 60 ಅಥವಾ ಅದಕ್ಕೆ ಸರಿಹೊಂದುವಂತಹ ಯಾವುದಾದರೂ ದಾಖಲೆಗಳನ್ನು ಕೊಡದೆ ಇದ್ದಲ್ಲಿ ಅಂತಹ ಖಾತೆಯನ್ನು ಬ್ಯಾಂಕ್ ನಲ್ಲಿ ಮುಚ್ಚಲಾಗುವುದು ಹಾಗೂ ಆ ಬ್ಯಾಂಕ್ ಖಾತೆಯನ್ನು ಮತ್ತೆ ಬಳಸಲು ಸಾಧ್ಯವಿಲ್ಲ. ಆದರೆ, ಆರ್ ಬಿ ಐ ಹೊಸ ಸುತ್ತೋಲೆ ಪ್ರಕಾರ, ಕೆ ವೈ ಸಿ ಕಾರಣದಿಂದ ಮುಚ್ಚಲಾಗಿರುವ ಖಾತೆಯನ್ನು ಮತ್ತೆ ಆರಂಭಿಸಲು ಸಾಧ್ಯವಿದೆ. ಬ್ಯಾಂಕ್ ಆಫ್ ಬರೋಡ ತನ್ನ ವೆಬ್ಸೈಟ್ನಲ್ಲಿ ಮರು ಕೆವೈಸಿ ಮಾಡುವ ಪ್ರಕ್ರಿಯೆ ಬಗ್ಗೆ ಮಾಹಿತಿಯನ್ನು ನೀಡಿದೆ.

ಮರು ಕೆವೈಸಿ ಮಾಡುವ ಪ್ರಕ್ರಿಯೆ ಹೀಗಿದೆ:-

• ಕೋಟಕ್ ಮಹೀಂದ್ರ ಬ್ಯಾಂಕ್ ಗ್ರಾಹಕರು ಈ ಬ್ಯಾಂಕ್ ನ ಅಧಿಕೃತ ಮೊಬೈಲ್ ಆಪ್ ಮೂಲಕ ನಿಮ್ಮ ಮೊಬೈಲ್ ನಲ್ಲಿಯೇ ಮರು ಕೆವೈಸಿ ಮಾಡಿಸಿಕೊಳ್ಳಬಹುದು.
• ನಿಮ್ಮ ಮೊಬೈಲ್ ನಲ್ಲಿ ಕೋಟಕ್ ಮಹೀಂದ್ರ ಬ್ಯಾಂಕ್ ಬ್ಯಾಂಕ್ ನ ಇನ್ಸ್ಟಾಲ್ ಮಾಡಿಕೊಳ್ಳಿ ನಂತರ ಲಾಗ್ ಇನ್ ಆಗಿ.
• ನಿಮ್ಮ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ ಅದನ್ನು ನಮೂದಿಸಿ, ಮರು ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಬಹುದು.
• ಈ ಮೂಲಕ ನಿಮ್ಮ ಖಾತೆ ಸ್ಥಗಿತಗೊಂಡಿದ್ದರೆ ತಕ್ಷಣವೇ ಅದು ವರ್ಕ್ ಆಗುತ್ತದೆ.
• ಮೊದಲಿಗೆ ನೀವು ನಿಮ್ಮ ಬ್ಯಾಂಕ್ ಶಾಖೆಗೆ ಹೋಗಬೇಕು ಅಲ್ಲಿ ಮರು ಕೆವೈಸಿ ಮಾಡಿಸಿಕೊಳ್ಳಲು ಅಗತ್ಯವಿರುವ ದಾಖಲೆಗಳನ್ನು ಝರಾಕ್ಸ್ ಮೂಲಕ ನೀಡಬೇಕು.
• ಆಧಾರ್ ಕಾರ್ಡ್ (Aadhaar Card) ಪ್ಯಾನ್ ಕಾರ್ಡ್ (Pan Card) ಹೊಂದಿರುವ ಅಭ್ಯರ್ಥಿ ವಿಡಿಯೋ ಕಾಲ್ (Video Call) ಮೂಲಕವೂ ಕೂಡ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಬಹುದು.
• ಬ್ಯಾಂಕ್ ಆಫ್ ಬರೋಡಾದ (Bank Of Baroda) ಗ್ರಾಹಕರು ಮರು ಕೆವೈಸಿ ಮಾಡಿಕೊಳ್ಳಲು ಹಿಂದಿನ ಕೆ ವೈ ಸಿ ದಾಖಲೆಗಳಲ್ಲಿ ಯಾವುದಾದರು ಬದಲಾವಣೆಗಳು ಇದ್ದರೆ ಅದನ್ನು ಕೊರಿಯರ್, ಪೋಸ್ಟ್, ಈಮೇಲ್ ಮೂಲಕ ಸಹಿ ಮಾಡಿ ಅಫಿಡವಿಟ್ ಅನ್ನು ಕಳುಹಿಸಬಹುದು.

 

ಇದನ್ನು ಓದಿ: Cauvery River Dispute : ಕಾವೇರಿ ವಿವಾದದಲ್ಲಿ ಪ್ರಧಾನಿ ಮಧ್ಯ ಪ್ರವೇಶಿಸಲಾಗದು!! ಅಚ್ಚರಿಯ ಹೇಳಿಕೆ ನೀಡಿ ಕಾರಣ ಬಿಚ್ಚಿಟ್ಟ ಕುಮಾರಸ್ವಾಮಿ

Leave A Reply

Your email address will not be published.