Crime News: ಬಿರಿಯಾನಿಗೆ ರಾಯಿತಾ ಕೇಳಿದ್ದೇ ತಪ್ಪಾಯ್ತು…ಹೊಡೆದು ಕೊಂದೇ ಬಿಟ್ಟ ಹೋಟೆಲ್‌ ಸಿಬ್ಬಂದಿ!!!

Hyderabad crime news customer beaten to death for asking extra raita for biryani

Hyderabad: ಬಿರಿಯಾನಿಗೆ ಹೆಚ್ಚಿನ ರಾಯಿತಾ ಕೇಳಿದ್ದಕ್ಕೆ ಹೋಟೆಲ್‌ನ ಸಿಬ್ಬಂದಿ 32 ವರ್ಷದ ವ್ಯಕ್ತಿಯನ್ನು ಹೊಡೆದು ಕೊಂದಿರುವ ಘಟನೆಯೊಂದು ನಡೆದಿದೆ. ಈ ಘಟನೆ ಭಾನುವಾರ ರಾತ್ರಿ ಪುಂಜಗುಟ್ಟಾ ಪ್ರದೇಶದ ಮೆರಿಡಿಯನ್‌ ರೆಸ್ಟೋರೆಂಟ್‌ನಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಲಿಯಾಕತ್‌(32) ಎಂದು ಗುರುತಿಸಲಾಗಿದ್ದು. ಈತ ತನ್ನ ಸ್ನೇಹಿತರ ಜೊತೆ ರೆಸ್ಟೋರೆಂಟ್‌ಗೆ ಹೋಗಿದ್ದು, ಅಲ್ಲಿ ಎಕ್ಸ್ಟ್ರಾ ರಾಯಿತಾ ಕೇಳಿದಕ್ಕೆ ಜಗಳ ಶುರುವಾಗಿದೆ. ಈ ವಾದ ನಂತರ ಜಗಳಕ್ಕೆ ತಿರುಗಿದ್ದು, ನಂತರ ಕೊಲೆಯ ರೂಪ ಪಡೆದುಕೊಂಡಿದೆ.

ಈ ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪರಸ್ಪರ ಹಲ್ಲೆ ನಡೆಸುವ ದೃಶ್ಯ ಇದೆ. ಹೋಟೆಲ್‌ನ ಮ್ಯಾನೇಜರ್‌ ಸೇರಿದಂತೆ ಹೋಟೆಲ್‌ ಸಿಬ್ಬಂದಿ ಲಿಯಾಕತ್‌ಗೆ ತೀವ್ರವಾಗಿ ಥಳಿಸಿದ್ದಾಗಿ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ಈ ಘಟನೆ ಪಂಜಗುಟ್ಟ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

ಇದನ್ನೂ ಓದಿ: ಸುಳ್ಯ : ಅಕ್ರಮ ಜಾನುವಾರು ಸಾಗಾಟ ಶಂಕೆ ತಪಾಸಣೆ

Leave A Reply

Your email address will not be published.