Murder: ಸ್ನೇಹಿತನ ಹೆಂಡತಿಯ ಜೊತೆ ರಹಸ್ಯ ಸಂಬಂಧ! ಕೊನೆಗೆ ಕೊಲೆಯಲ್ಲಿ ಅಂತ್ಯ! ಕಾರಣ ನೀವಂದುಕೊಂಡದ್ದಲ್ಲ, ಬೇರೆನೇ ಇದೆ!!!

Tamilnadu crime news 30 year old killed illicit lover in front of daughter in maraimalai Nagar

Tamilnadu: ತಮಿಳುನಾಡಿನ (tamilnadu) ಚೆಂಗಲ್ಪಟ್ಟು ಜಿಲ್ಲೆಯ ಮರಿಮಲೈ ನಗರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಹೌದು, ಯುವಕನೊಬ್ಬ ಸ್ನೇಹಿತನ ಹೆಂಡತಿಯ ಜೊತೆ ರಹಸ್ಯ ಸಂಬಂಧ ಹೊಂದಿದ್ದು, ಕೊನೆಗೆ ತನ್ನ ಪ್ರೇಯಸಿಯನ್ನು ಆಕೆಯ ಮಗಳ ಮುಂದೆಯೇ ಬರ್ಬರವಾಗಿ ಹತ್ಯೆ (Murder) ಮಾಡಿ ಪೊಲೀಸ್​ ಠಾಣೆಗೆ ತೆರಳಿ ಶರಣಾಗಿರುವ ಘಟನೆ ನಡೆದಿದೆ.

ಸುಡಾನ್​ (30) ಎಂಬಾತನೇ ಆರೋಪಿ. ಮೃತ ಮಹಿಳೆ ಧರಣಿ (21). ಈಕೆ ಮರಿಮಲೈ ನಗರದ ರಾಜೀವ್​ಗಾಂಧಿ ನಗರದ ನಿವಾಸಿ ಹಾಗೂ ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್​ ಆಗಿರುವ ಸುಂದರ್​ ಎಂಬಾತನ ಪತ್ನಿ. ಈ ದಂಪತಿಗೆ ಇಬ್ಬರು ಮಕ್ಕಳಿದ್ದರು. ಸುಂದರ್​ ಸ್ನೇಹಿತ ಸುಡಾನ್ ಆಗಾಗ ಇವರ ಮನೆಗೆ ಬರುತ್ತಿದ್ದ. ಇಬ್ಬರು ಜತೆಯಲ್ಲೇ ಕುಳಿತು ಎಣ್ಣೆ ಪಾರ್ಟಿ ಮಾಡುತ್ತಿದ್ದರು. ಈ ವೇಳೆಯೇ ಸುಡಾನ್​ ಮತ್ತು ಧರಣಿ ನಡುವೆ ಸ್ನೇಹ ಬೆಳೆದಿತ್ತು. ನಂತರ ಈ ಸ್ನೇಹ ಪ್ರೀತಿ, ಅಕ್ರಮ ಸಂಬಂಧಕ್ಕೆ ತಿರುಗಿತು.

ಇಬ್ಬರು ಸುಂದರ್​ಗೆ ಗೊತ್ತಾಗದಂತೆ ರಹಸ್ಯ ಸಂಬಂಧವನ್ನು ಇಟ್ಟುಕೊಂಡಿದ್ದರು. ಆದರೆ, ಸತ್ಯ ಬೂದಿ ಮುಚ್ಚಿದ ಕೆಂಡದಂತೆ ಎನ್ನುವ ಹಾಗೆ ಕೆಲವು ತಿಂಗಳುಗಳ ನಂತರ ಸುಂದರ್​ಗೆ ಈ ವಿಚಾರ ಗೊತ್ತಾಗಿ ಹೋಯಿತು. ಹಾಗೂ ಇಬ್ಬರಿಗೂ ಎಚ್ಚರಿಕೆ ನೀಡಿದ್ದ. ಬಳಿಕ ಧರಣಿ ಸುಡಾನ್​ ಜತೆ ಮಾತನಾಡುವುದನ್ನು ನಿಲ್ಲಿಸಿದಳು.

ಸುಡಾನ್ ಜೊತೆ ಮಾತು ನಿಲ್ಲಿಸಿದಾಕೆ ಬೇರೊಬ್ಬನ ಹಿಂದೆ ಬಿದ್ದಿದ್ದಳು.
ಧರಣಿಗೆ ಬೇರೊಬ್ಬ ವ್ಯಕ್ತಿಯ ಜತೆ ಸಂಬಂಧ ಇರುವುದು ಸುಡಾನ್​ಗೆ ತಿಳಿಯಿತು. ಈತ ಸಿಟ್ಟುಗೊಂಡು ಧರಣಿಯನ್ನು ಭೇಟಿಯಾಗಿ ಪ್ರಶ್ನೆ ಮಾಡಿದನು. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆಯಿತು.
ಕೋಪದಿಂದ ಸುಡಾನ್ ಮರುದಿನ ಬೆಳಗ್ಗೆ ಆಕೆಯನ್ನು ಕೊಂದಿದ್ದಾನೆ.

ಹೌದು, ಮಂಗಳವಾರ ಸುಂದರ್​, ತನ್ನ ಕೆಲಸಕ್ಕೆ ತೆರಳಿದಾಗ, ಆತನ ಮನೆಗೆ ತೆರಳಿದ ಸುಡಾನ್​, ಎರಡು ವರ್ಷದ ಮಗಳ ಎದುರಲ್ಲೇ ಧರಣಿಗೆ ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಂದಿದ್ದಾನೆ. ಆಕೆ ಮೃತಪಟ್ಟಿರುವುದು (death) ಖಚಿತವಾದ ಬಳಿಕ ಚಾಕು ಸಮೇತ ಪೊಲೀಸ್​ ಠಾಣೆಗೆ ತೆರಳಿ ಸುಡಾನ್​ ಶರಣಾಗಿದ್ದಾನೆ. ಬಳಿಕ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಧರಣಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜನರಲ್​ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಧರ್ಮಸ್ಥಳ ಸೌಜನ್ಯಾ ಪ್ರಕರಣ ತನಿಖೆಗೆ ಕೇಂದ್ರವನ್ನು ಒತ್ತಾಯಿಸಲು ಸಿದ್ಧ – ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಗ್ ಸ್ಟೇಟ್ ಮೆಂಟ್! ಆದರೆ ಮೊದಲು ಅದೊಂದು ಕೆಲಸ ಆಗ್ಬೇಕು, ಏನದು ??

Leave A Reply

Your email address will not be published.