Nawazuddin Siddiqui: ರಿಷಬ್ ಶೆಟ್ಟಿ ಭೇಟಿ ಬಗ್ಗೆ ಮಾತನಾಡಿದ ನವಾಜುದ್ದೀನ್ ಸಿದ್ಧಿಕಿ! ಕಾಂತರ-2 ನಲ್ಲಿ ನಟಿಸ್ತಾರಾ ಈ ಬಾಲಿವುಡ್ ಸ್ಟಾರ್!

Bollywood Actor Nawazuddin Siddiqui talks about Kannada actor Rishab Shetty

Nawazuddin Siddiqui: ಕಾಂತಾರ (Kantara) ಸಿನಿಮಾದ ಬಳಿಕ ರಿಷಬ್ ಶೆಟ್ಟಿ (Rishab Shetty) ಪ್ಯಾನ್ ಇಂಡಿಯಾ (Pan India) ಸ್ಟಾರ್ ಆಗಿದ್ದಾರೆ. ಸಿನಿಮಾ ರಿಲೀಸ್ ಆಗಿ ಬಹುಷ ವರ್ಷ ಆಗುತ್ತಾ ಬಂದರೂ ಇನ್ನೂ ಕಾಂತಾರ ಬಗ್ಗೆಯಾಗಲಿ, ನಟ-ನಿರ್ದೇಶಕ ರಿಷಬ್ ಶೆಟ್ಟಿ ಬಗ್ಗೆಯಾಗಲಿ ಗುಣಗಾನ ಮಾಡೋದು ಇನ್ನೂ ಕಡಿಮೆಯಾಗಿಲ್ಲ. ಹಲವು ಚಿತ್ರರಂಗದ ದಿಗ್ಗಜರು ರಿಷಬ್​ ಗೆಳೆತನಕ್ಕೆ ಕೈಚಾಚಿದ್ದಾರೆ. ಸದ್ಯ ಇದೀಗ ಬಾಲಿವುಡ್(Bollywood Star) ಸ್ಟಾರ್ ನಟ ನವಾಜುದ್ದೀನ್ ಸಿದ್ಧಿಕಿ(Nawazuddin Siddiqui) ಸ್ಯಾಂಡಲ್​ವುಡ್(Sandalwood) ಸ್ಟಾರ್ ರಿಷಬ್ ಶೆಟ್ಟಿ ಅವರ ಬಗ್ಗೆ ಮಾತನಾಡಿದ್ದಾರೆ.

ಹೌದು, ಕಾಂತಾರ ಸಿನಿಮಾ ಹಿಂದಿಯಲ್ಲಿ ದೊಡ್ಡ ಹಿಟ್ ಆದ ಬೆನ್ನಲ್ಲೆ ಬಾಲಿವುಡ್​ನ ಹಲವು ಖ್ಯಾತ ನಟರು ರಿಷಬ್ ರೊಟ್ಟಿಗೆ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಅನುಪಮ್ ಖೇರ್(Anupam Kher), ಆಯುಷ್ಮಾನ್ ಖುರಾನಾ(Ayushman Khurana) ಇನ್ನೂ ಕೆಲವರು ರಿಷಬ್ ಶೆಟ್ಟಿಯೊಟ್ಟಿಗಿನ ತಮ್ಮ ಗೆಳೆತನದ ಬಗ್ಗೆ ಹೇಳಿಕೊಂಡಿದ್ದಾರೆ. ಆದರೀಗ ಈ ನಡುವೆ ಬಾಲಿವುಡ್​ನ ಖ್ಯಾತ ನಟ ನವಾಜುದ್ಧೀನ್ ಸಿದ್ಧಿಕಿ ತಮ್ಮ ಹಾಗೂ ರಿಷಬ್ ಶೆಟ್ಟಿ ಗೆಳೆತನದ ಬಗ್ಗೆ ಮಾತನಾಡಿ ಎಲ್ಲರ ಗಮನ ಸೇಳೆದಿದ್ದಾರೆ

“ಕಳೆದ ಡಿಸೆಂಬರ್ ತಿಂಗಳಲ್ಲಿ ರಿಷಬ್ ಹಾಗೂ ನಾನು ಭೇಟಿಯಾಗಿದ್ದೆವು. ನನ್ನ ಮನೆಗೆ ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ(Pramod Shetty) ಹಾಗೂ ಕಾಂತಾರ ಚಿತ್ರ ತಂಡ ಬಂದು ಆತಿಥ್ಯ ಸ್ವೀಕರಿಸಿತ್ತು. ಈ ವೇಳೆ ನನ್ನ ಹಾಗೂ ರಿಷಬ್ ಶೆಟ್ಟಿಯ ನಡುವೆ ಸಾಕಷ್ಟು ವಿಷಯಗಳು ಕಾಮನ್ ಆಗಿವೆ ಆ ಸಾಮಾನ್ಯ ವಿಷಯಗಳ ಬಗ್ಗೆ ನಾವು ಗಂಟೆಗಟ್ಟಲೆ ಮಾತನಾಡಿದೆವು. ರಿಷಬ್ ಹಾಗೂ ಅವರ ಗೆಳೆಯರು ಸಾಕಷ್ಟು ರಂಗಭೂಮಿ ಚಟುವಟಿಕೆಗಳನ್ನು ಮಾಡಿದ್ದಾರೆ. ಮತ್ತೊಂದು ಪ್ರಮುಖ ವಿಷಯವೆಂದರೆ ನಮ್ಮಿಬ್ಬರ ಗುರುಗಳು ಒಂದೇ. ಈ ಮೊದಲೂ ಸಹ ನಮ್ಮಿಬ್ಬರಿಗೂ ಪರಿಚಯವಿತ್ತು, ನಾವು ಮೊದಲೇ ಪರಿಚಿತರು. ಅವರು ಇನ್ನೂ ರಂಗಭೂಮಿಯೊಟ್ಟಿಗೆ ತಮ್ಮ ಸಂಬಂಧ ಇರಿಸಿಕೊಂಡಿದ್ದಾರೆ. ತಮ್ಮ ನೆಲಮೂಲದೊಂದಿಗೆ ಸಂಬಂಧ ಇರಿಸಿಕೊಂಡಿದ್ದಾರೆ, ತಮ್ಮ ಸಂಸ್ಕೃತಿಯ ಬಗ್ಗೆ ಸಿನಿಮಾ ಸಹ ಮಾಡಿದ್ದಾರೆ. ನಮ್ಮ ಗುರುಗಳು ಒಬ್ಬರೇ ಆಗಿರುವ ಕಾರಣ ನಾವು ಬೇಗನೆ ಗೆಳೆಯರಾಗಿಬಿಟ್ಟೆವು” ಎಂದಿದ್ದಾರೆ.

ಬಳಿಕ ಕಾಂತಾರ 2(Kantara 2) ಸಿನಿಮಾದಲ್ಲಿ ನೀವೂ ನಟಿಸುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿರುವ ನವಾಜುದ್ಧೀನ್ ಸಿದ್ಧಿಕಿ, ”ಆ ಬಗ್ಗೆ ನಾನು ಈಗಲೇ ಏನೂ ಹೇಳಲಾಗದು. ನೋಡೋಣ ಅವಕಾಶ ದೊರೆತರೆ ಖಂಡಿತ ನಟಿಸುತ್ತೇನೆ. ರಿಷಬ್ ಅದ್ಭುತವಾದ ನಟ, ನಿರ್ದೇಶಕ ಬಹಳ ಪ್ರತಿಭಾವಂತ, ರಾಜ್ ಬಿ ಶೆಟ್ಟಿ ಸೇರಿದಂತೆ ಅವರ ಇಡೀ ತಂಡವೆ ಬಹಳ ಪ್ರತಿಭಾವಂತ ತಂಡ. ಅವರೊಟ್ಟಿಗೆ ಕೆಲಸ ಮಾಡುವುದು ಖುಷಿಯ ವಿಷಯ ಎಂದಿದ್ದಾರೆ ನವಾಜುದ್ಧೀನ್ ಸಿದ್ಧಿಕಿ.

ಅಂದಹಾಗೆ ಈ ಹಿಂದೆ ಕೂಡ ನವಾಝುದ್ದೀನ್ ಸಿದ್ದಿಕಿ ಮಾತನಾಡಿ ರಿಷಬ್ ಶೆಟ್ಟಿ ಮೇಲೆ ಹೊಟ್ಟೆಕಿಚ್ಚು ಆಗುತ್ತಿದೆ ಎಂದು ಹೇಳಿದ್ದರು. ಅಲ್ಲದೆ ಇದು ‘ನಕಾರಾತ್ಮಕ’ ರೀತಿಯಲ್ಲಿ ಅಲ್ಲ ಎಂದು ಕೂಡ ಅವರು ಸ್ಪಷ್ಟಪಡಿಸಿದ್ದರು. ಇಡೀ ದೇಶ ಇಂದು ರಿಷಬ್ ಶೆಟ್ಟಿ ನೋಡಿ ಶಾಕ್ ಆಗಿದೆ. ಅವರು ಯಾವುದನ್ನೂ ಪ್ರಚಾರ ಮಾಡಿಲ್ಲ. ಸದ್ದಿಲ್ಲದ್ದೇ ಬಿಡುಗಡೆ ಮಾಡಿದರು ಮತ್ತು ಎಲ್ಲಾ ಬ್ರೇಕ್ ಮಾಡಿದರು. ಯಾರಾದರೂ ಒಳ್ಳೆಯ ಕೆಲಸ ಮಾಡಿದರೆ ಅಸೂಯೆಯ ಭಾವನೆ ಬೆಳೆಯುತ್ತದೆ ಮತ್ತು ಅದೇ ಸಮಯದಕ್ಕೆ ಸ್ಪರ್ಧೆಗೆ ಪ್ರೇರೇಪಿಸುತ್ತದೆ’ ಎಂದು ಹೇಳಿದ್ದರು. ನಂತರ ಅವರಿಗೆ ನಿರೂಪಕರು ಅಸೂಯೆ ಪದ ಬಳಸಿದ್ದ ಬಗ್ಗೆ ಕೇಳಿದಾಗ. ಪ್ರತಿಕ್ರಿಯೆ ನೀಡಿದ ನವಾಜುದ್ದೀನ್, ಖಂಡಿತವಾಗಿಯೂ ಹೊಟ್ಟೆಕಿಚ್ಚು ಆಗುತ್ತದೆ. ಯಾಕೆಂದರೆ ಅವರು ಅಷ್ಟು ಒಳ್ಳೆಯ ಸಿನಿಮಾ ಮಾಡಿದ್ದಾರೆ. ಇದು ನಕಾರಾತ್ಮಕ ಕತೆಯ ಅಸೂಯೆ ಅಲ್ಲ’ ಎಂದಿದ್ದರು.

ಅಲ್ಲದೆ ನವಾಝುದ್ದೀನ್ ಅವರ ಮಾತುಗಳಿಗೆ ನಟ ರಿಷಬ್ ಶೆಟ್ಟಿ ಪ್ರತಿಕ್ರಿಯೆ ನೀಡಿ ಅವರ ಹಲವು ಸಿನಿಮಾಗಳನ್ನು ನೋಡಿರುವುದಾಗಿ ಹೇಳಿದರು. ‘ನಾನು ನವಾಜ್ ಭಾಯ್ ಅವರ ಹಲವಾರು ಸಿನಿಮಾಗಳನ್ನು ನೋಡಿದ್ದೇನೆ ಮತ್ತು ಅವರ ಪರಿಶ್ರಮ ಮತ್ತು ಕಷ್ಟದ ಪಯಣವನ್ನು ನೋಡಿದ್ದೇನೆ. ಅವರೂ ಕೂಡ ನಮ್ಮ ಹಾಗೆ. ನಾವು ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಹಾಗಾಗಿ ನಾವು ಇಂಡಸ್ಟ್ರಿಯಲ್ಲಿ ಏನಾದರೂ ದೊಡ್ಡದು ಮಾಡಬೇಕೆಂದು ಬಯಸುತ್ತೇವೆ. ಅವರು ದೊಡ್ಡ ಸ್ಫೂರ್ತಿ. ಅವರು ರಂಗಭೂಮಿಯಿಂದ ಬಂದು ಹಲವು ಸಣ್ಣ ಪಾತ್ರಗಳನ್ನು ಮಾಡಿದ್ದಾರೆ. ನಾವು ಕೂಡ ಕನ್ನಡ ಚಿತ್ರಂರಗದಲ್ಲಿ ಸಣ್ಣ ಪಾತ್ರಗಳನ್ನು ಮಾಡಿದ್ದೇವೆ. ಅವರು ನಮ್ಮ ಸೀನಿಯರ್. ನಮ್ಮದು ಒಂದೇ ರೀತಿಯ ಪಯಣ’ ಎಂದು ಪ್ರತಿಕ್ರಿಯಿಸಿದ್ದರು.

ಇನ್ನು ನವಾಜುದ್ಧೀನ್ ಸಿದ್ಧಿಕಿ ಪ್ರಸ್ತುತ ಸಾರಾ ರಾರಾ(Sara Rara) ಹೆಸರಿನ ಸಿನಿಮಾದಲ್ಲಿ ನಟಿಸಿದ್ದು ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಿರತರಾಗದ್ದಾರೆ. ಕಂಗನಾ ರನೌತ್(Kangana Ranaut) ಜೊತೆಗೆ ಟಿಕು ವೆಡ್ಸ್ ಶೇರು(Tiku Weds Sheru) ಹೆಸರಿನ ಸಿನಿಮಾದಲ್ಲಿ ನಟಿಸುತ್ತದ್ದಾರೆ. ಅದರ ಜೊತೆಗೆ ಇನ್ನೂ ಕೆಲವು ಸಿನಿಮಾಗಳಲ್ಲಿ ನವಾಜುದ್ಧೀನ್ ಬ್ಯುಸಿಯಾಗಿದ್ದಾರೆ. ಇತ್ತ ರಿಷಬ್ ಶೆಟ್ಟಿ, ಕಾಂತಾರ 2 ಸಿನಿಮಾಕ್ಕೆ ಕೈ ಹಾಕಿದ್ದಾರೆ. ಕಾಂತಾರ ಸಿನಿಮಾ ನಡೆದ ಕಾಲಘಟ್ಟಕ್ಕಿಂತಲೂ ಹಿಂದಿನ ಕಾಲಘಟ್ಟದ ಕತೆಯನ್ನು ಕಾಂತಾರ 2 ಸಿನಿಮಾ ಒಳಗೊಂಡಿರಲಿದೆ. ಸಿನಿಮಾದ ಚಿತ್ರಕತೆಯ ಮೊದಲ ಡ್ರಾಫ್ಟ್ ಮುಗಿದಿದ್ದು ಸಿನಿಮಾದ ಚಿತ್ರೀಕರಣ ಈ ಮಳೆಗಾಲಕ್ಕೆ ಪ್ರಾರಂಭವಾಗಲಿದೆ.

ಇದನ್ನೂ ಓದಿ:Another cheetah death from South Africa- ಆಕ್ರಮಣಕಾರಿಯಾಗಿ ಸಂಭೋಗಿಸಿದ ಗಂಡು ಚೀತಾ! ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದಿದ್ದ ಮತ್ತೊಂದು ಚೀತಾ ಸಾವು!

Leave A Reply

Your email address will not be published.