The Kapil Sharma Show: ಹಾಸ್ಯನಟ ಕೃಷ್ಣ ಅಭಿಷೇಕ್ ‘ಕಪಿಲ್‌ ಶರ್ಮಾ ಶೋʼ ಬಿಡಲು ಕಾರಣ ಯಾರು? ದಾರಿ ತಪ್ಪಲು ಇವರೇ ಹೊಣೆ ಎಂದ ನಟ!

The Kapil Sharma Show: ಕಪಿಲ್‌ ಶರ್ಮಾ ಶೋ ಬಹಳಷ್ಟು ಜನಪ್ರಿಯತೆ ಪಡೆದ ಶೋ ಎಂದೇ ಹೇಳಬಹುದು. ತನ್ನ ಈ ಶೋನಲ್ಲಿ ಅಭಿಮಾನಿಗಳನ್ನು ನಗಿಸುವಲ್ಲಿ ಕಪಿಲ್ ಶರ್ಮಾ (The Kapil Sharma Show) ಎತ್ತಿದ ಕೈ ಎಂದೇ ಹೇಳಬಹುದು. ಈ ಶೋನಲ್ಲಿ ಅನೇಕ ಮಂದಿ ನಟರಿದ್ದಾರೆ. ಅವರಲ್ಲಿ ಒಬ್ಬರು ಹಾಸ್ಯನಟ ಕೃಷ್ಣ ಅಭಿಷೇಕ್. ತನ್ನ ಪ್ರಚಂಡ ಕಾಮಿಕ್ ಶೈಲಿಗೆ ಹೆಸರುವಾಸಿಯಾದ ನಟ ಎಂದರೆ ತಪ್ಪಿಲ್ಲ. ಜನರನ್ನು ತನ್ನ ಅಭಿನಯದಿಂದ ನಗೆಗಡಲಲ್ಲಿ ತೇಲಿಸುತ್ತಿದ್ದ ಕೃಷ್ಣ ನಂತರ ಕಾರ್ಯಕ್ರಮಕ್ಕೆ ಒಂದು ದಿನ ವಿದಾಯ ಹೇಳಿದರು. ಆದರೆ ಈಗ ಬಂದಿರೋ ಸುದ್ದಿ ಏನೆಂದರೆ ಇವರು ಮತ್ತೆ ಈ ಶೋಗೆ ಪುನರಾಗಮನ ಮಾಡಿದ್ದಾರೆ.

ಕೃಷ್ಣ ಅಭಿಷೇಕ್ ಕಾರ್ಯಕ್ರಮದ ಪ್ರಮುಖ ಭಾಗವೆಂದೇ ಹೇಳಬಹುದು. ಜನರು ತುಂಬಾ ಇಷ್ಟಪಡುವ ಸಪ್ನಾ ಪಾತ್ರವನ್ನು ಕೃಷ್ಣ ನಿಜಕ್ಕೂ ಜನರ ಮನದಲ್ಲಿ ಛಾಪು ಮೂಡಿಸುವ ಹಾಗೆ ನಿರ್ವಹಿಸಿದ್ದಾರೆ. ಆದರೆ ಕೃಷ್ಣ ಈ ಕಾರ್ಯಕ್ರಮವನ್ನು ತೊರೆದಾಗಿನಿಂದ, ಅವರ ಅಭಿಮಾನಿಗಳು ಮತ್ತು ಕಾರ್ಯಕ್ರಮದ ಅಭಿಮಾನಿಗಳು ಅವರನ್ನು ವಾಪಾಸ್‌ ಬರುವಂತೆ ನಿರಂತರವಾಗಿ ಒತ್ತಾಯಿಸುತ್ತಿದ್ದರು. ಕೊನೆಗೂ ಈಗ ವಾಪಸ್ ಬಂದಿದ್ದಾರೆ. ಕಾರ್ಯಕ್ರಮಕ್ಕೆ ಹಿಂತಿರುಗಿದ ಕೂಡಲೇ ಶೋದಿಂದ ದೂರ ಸರಿದಿದ್ದಕ್ಕೆ ಕಾರಣವನ್ನೂ ನೀಡಿದ್ದಾರೆ.

ಕಾರ್ಯಕ್ರಮದ ಪ್ರೋಮೋ ವೀಡಿಯೋವೊಂದು ಹೊರಬಿದ್ದಿದ್ದು, ಅದರಲ್ಲಿ ಕೃಷ್ಣ ಅವರು ಬ್ರೈನ್ ವಾಶ್ ಆಗಿದ್ದು, ಅದಕ್ಕಾಗಿಯೇ ಕಾರ್ಯಕ್ರಮದಿಂದ ಹಿಂದೆ ಸರಿದಿರುವುದಾಗಿ ಹೇಳಿದ್ದಾರೆ. ಈ ವೀಡಿಯೊದಲ್ಲಿ, ಕೃಷ್ಣ ಅವರು ಕಾರ್ಯಕ್ರಮದ ಉಳಿದ ಸದಸ್ಯರಿಗೆ ಎಲ್ಲರನ್ನು ತುಂಬಾ ಮಿಸ್ ಮಾಡಿಕೊಂಡಿದ್ದಾರೆ ಎಂದು ಹೇಳುತ್ತಾರೆ, ಆದರೆ ಯಾರೂ ಅವರನ್ನು ಕರೆಯಲಿಲ್ಲ. ಈ ಬಗ್ಗೆ ಕಪಿಲ್ ಅವರು ಕರೆ ಮಾಡಿದ್ದೆ ಆದರೆ ಬರಲಿಲ್ಲ ಎಂದಿದ್ದಾರೆ.

ಕಪಿಸ್ ಶರ್ಮಾ ಅವರ ಈ ವಿಷಯದ ಬಗ್ಗೆ, ಕಪಿಲ್‌ ಶರ್ಮಾ ಅವರು ಯಾರು ಮಾಡಿದ್ದು? ಅದಕ್ಕೆ ಕೃಷ್ಣ ಹೇಳುತ್ತಾನೆ ಹಣ ತನ್ನ ಬ್ರೈನ್ ವಾಶ್ ಮಾಡಿದೆ ಎಂಬ ಪ್ರೋಮೋ ವೀಡಿಯೋವೊಂದು ಬಂದಿದೆ. ಆದರೆ ಮೂಲಗಳ ಪ್ರಕಾರ, ಅವರು ಒಪ್ಪಂದ (Agreement) ಮತ್ತು ಹಣದ ವಿಚಾರಕ್ಕೆ ಕಾರ್ಯಕ್ರಮವನ್ನು ತೊರೆದಿದ್ದಾರೆ ಎಂದು ಹೇಳಲಾಗಿದೆ. ಇಷ್ಟು ಮಾತ್ರವಲ್ಲದೇ ಇತ್ತೀಚಿನ ಸಂದರ್ಶನವೊಂದರಲ್ಲಿ, ಈಗ ಒಪ್ಪಂದದಲ್ಲಿ ಕೆಲವು ಬದಲಾವಣೆಗಳಿವೆ, ನಂತರ ಅವರು ಒಟ್ಟಿಗೆ ಸೇರಿದ್ದಾರೆ ಎಂಬ ಮಾತನ್ನು ಕೃಷ್ಣ ಹೇಳಿದ್ದಾರೆ.

ಕೃಷ್ಣ ಅಭಿಷೇಕ್ ಜನಪ್ರಿಯ ಹಾಸ್ಯನಟ. ಈ ಹಿಂದೆ ಈ ಶೋನಲ್ಲಿ ಕೆಲಸ ಮಾಡಲು 10 ರಿಂದ 12 ಲಕ್ಷ ರೂಪಾಯಿ ಭಾರಿ ಶುಲ್ಕ ಪಡೆಯುತ್ತಿದ್ದರು ಎಂದು ವರದಿಯೊಂದು ಹೇಳಿತ್ತು. ಇದೀಗ ಹಣಕ್ಕೆ ಸಂಬಂಧಿಸಿದ ಒಪ್ಪಂದದಲ್ಲಿ ಬದಲಾವಣೆ ಆಗಿರುವುದರಿಂದ ಕಮ್ ಬ್ಯಾಕ್ ಜತೆಗೆ ಅವರ ಶುಲ್ಕವೂ ಹೆಚ್ಚಿರುವುದು ಸ್ಪಷ್ಟವಾಗಿದೆ. ಆದರೆ ಎಷ್ಟು ಶುಲ್ಕ ಪಡೆಯುತ್ತಾರೆ ಎಂಬ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.

ಇದನ್ನೂ ಓದಿ: ಬಿಜೆಪಿಯ `ಪ್ರಜಾ ಪ್ರಣಾಳಿಕೆ’ ಬಿಡುಗಡೆ : BPL ಕುಟುಂಬಕ್ಕೆ ಪ್ರತಿದಿನ ಅರ್ಧ ಲೀಟರ್ ನಂದಿನಿ ಹಾಲು, 5 ಕೆಜಿ ಅಕ್ಕಿ, 5 ಕೆಜಿ ಸಿರಿ ಧಾನ್ಯ !

 

Leave A Reply

Your email address will not be published.