Samantha Divorce Reason: ಯಾರ್​ ಜೊತೆನಾದ್ರೂ ಸಂಬಂಧ ಇಟ್ಕೊಳ್ಳಿ, ಆದ್ರೆ ಚೆನ್ನಾಗಿ ನೋಡ್ಕೊಳ್ಳಿ – ಮಾಜಿ ಪತಿ ಬಗ್ಗೆ ಸಮಂತಾ ಶಾಕಿಂಗ್​ ಹೇಳಿಕೆ !

Samantha Divorce Reason Revealed: ಸಮಂತಾ ಅವರ ಮಾಜಿ ಪತಿ ನಾಗಚೈತನ್ಯ (Nagachaitanya) ಹಾಗೂ ನಟಿ ಸೋಭಿತಾ ಧೂಳಿಪಾಲ (Sobhita Dhulipala) ಅವರೊಂದಿಗೆ ಡೇಟಿಂಗ್​ ಮಾಡ್ತಿದ್ದಾರೆ ಅನ್ನೋ ಸುದ್ದಿ ಹಲವು ಹರಿದಾಡುತ್ತಿದೆ.

ಈ ವಂದತಿಗಳ ಬಗ್ಗೆ ಕೊನೆಗೂ ಸಮಂತಾ ಮೌನ ಮುರಿದಿದ್ದಾರೆ ಸಮಂತಾ. ” ಯಾರು ಯಾರೊಂದಿಗೆ ಬೇಕಾದ್ರೂ ಡೇಟಿಂಗ್​ ಮಾಡ್ಲಿ, ಸಂಬಂಧ ಇಟ್ಟುಕೊಳ್ಳಿ, ನಾನು ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳುವುದಿಲ್ಲ ” ಎಂದು ಆಕೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ದಿ ಸಿಯಾಸತ್ ಡೈಲಿ ಪತ್ರಿಕೆ ವರದಿ ಮಾಡಿರುವಂತೆ, “ಯಾರು ಯಾರೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬುದರ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ಯಾರೇ ಆದರೂ ಪ್ರೀತಿಯ ಮೌಲ್ಯವನ್ನು ತಿಳಿಯದವರು ಎಷ್ಟು ಜನರನ್ನು ಭೇಟಿಯಾದರೂ ಉಳಿಯುವುದು ಕೇವಲ ಕಣ್ಣೀರು. ಕನಿಷ್ಠ ಆ ಹುಡುಗಿಯಾದರೂ ಸಂತೋಷವಾಗಿರಬೇಕು. ಅವರು (Nagachaitanya) ತನ್ನ ನಡವಳಿಕೆಯನ್ನು ಬದಲಾಯಿಸಿಕೊಂಡು ಹುಡುಗಿಯನ್ನು ನೋಯಿಸದಂತೆ ನೋಡಿಕೊಂಡರೆ ಎಲ್ಲರಿಗೂ ಒಳ್ಳೆಯದು” ಎಂದು ಪ್ರತಿಕ್ರಿಯಿಸಿದ್ದಾರೆ. ಆ ಮೂಲಕ ಆಕೆ ನಾಗ ಚೈತನ್ಯದಿಂದ ನೋವು ತಿಂದದ್ದು ಸ್ಪಷ್ಟವಾಗಿದೆ ಅದನ್ನು ಆಕೆ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.

ದಿ ಸಿಯಾಸತ್ ಪ್ರಕಟಿಸಿದಂತೆ, ನಾಗಚೈತನ್ಯ ಜೊತೆ ತಾವು ನಡೆಸಿದ ವೈವಾಹಿಕ ಜೀವನದ ಬಗ್ಗೆಯೂ ಸಮಂತಾ ಮಾತನಾಡಿದ್ದಾರೆ. ” ನಾವು ತುಂಬಾ ಕತ್ತಲೆಯಲ್ಲಿದ್ದೆವು, ಹೀಗಾಗಿ ಬೆಳಕು ನೋಡುವ ಆಸೆ ಇಬ್ಬರಿಗೂ ಇತ್ತು. ಹೀಗಾಗಿ ದೂರ ಆಗಿದ್ದೇವೆ ” ಎಂದಿದ್ದಾರೆ.

ಇದೀಗ ನಟ ನಾಗಚೈತನ್ಯ ನಟಿ ಸೋಭಿತಾ ಜೊತೆ ಡೇಟಿಂಗ್ ಮಾಡ್ತಿದ್ದಾರೆ. ಆ ಬಗ್ಗೆ ಇಲ್ಲಿಯತನಕ ಸುಮ್ಮನೆ ಇದ್ದ ಸಮಂತಾ ಈಗ ಸೂಕ್ಷ್ಮವಾಗಿ ಮನಬಿಚ್ಚಿ ಮಾತನಾಡಿದ್ದಾರೆ. ಸಮಂತಾ ಹಾಗೂ ನಾಗಚೈತನ್ಯ ಜೋಡಿ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದರು. ತಮ್ಮ ವಿವಾಹದ ನಾಲ್ಕು ವರ್ಷಗಳ ನಂತರ ಅಕ್ಟೋಬರ್ 2021 ರಲ್ಲಿ ಅವರಿಬ್ಬರೂ ದೂರಾಗಿದ್ದಾರೆ. ಇಲ್ಲಿಯತನಕ ಅವರಿಬ್ಬರ ಡೈವೋರ್ಸ್ ಗೆ ಕಾರಣ (Samantha Divorce Reason) ಹುಡುಕಲು ಪ್ರಯತ್ನಿಸಿ ಸೋತಿತ್ತು ಇಡೀ ದೇಶದ ಮೀಡಿಯಾ. ಈಗ ಒಂದೊಂದಾಗಿ ಎಲ್ಲವೂ ಸ್ಪಷ್ಟವಾಗುತ್ತಿದೆ. ಆಕೆಯ ಡೈವೋರ್ಸ್ ಗೆ ಈಗ ಕಾರಣ ಗೊತ್ತಾಗಿದೆ.

ಆಕೆ ಮುಂದುವರಿದು ಹೇಳಿದ್ದಾಳೆ: “ನಾನು ತುಂಬಾ ಕತ್ತಲೆಯಾದ ಕಠಿಣ ಸ್ಥಳದಲ್ಲಿದ್ದೆ. ನಾನು ಕೆಲವು ಗಾಢವಾದ ಆಲೋಚನೆಗಳನ್ನು ಹೊಂದಿದ್ದೆ. ಈ ಆಲೋಚನೆಗಳು ನನ್ನನ್ನು ನಾಶಮಾಡಲು ನಾನು ಬಿಡುವುದಿಲ್ಲ. ಇದರರ್ಥ ನಾನು ಒಂದು ಹೆಜ್ಜೆ ಮುಂದೆ ನೋಡುವುದನ್ನು ಪ್ರಾರಂಭಿಸಬೇಕು. ಅನೇಕ ಆತ್ಮೀಯರು ನನ್ನ ಬೆಂಬಲಕ್ಕೆ ನಿಂತಿರುವುದು ನನ್ನ ಅದೃಷ್ಟ” ಎಂದಿದ್ದಾರೆ ನಟಿ ಸಮಂತಾ. ಇದರ ಅರ್ಥ ಆಕೆ ಆತ್ಮಹತ್ಯೆ ಮಾಡಲು ಯೋಚಿಸಿದ್ದಳು ಎನ್ನುವುದಾಗಿದೆ. ಈಗ ಆಕೆ ಅದೆಲ್ಲ ನೋವನ್ನು ಮೀರಿದ್ದು ಮತ್ತೆ ತಮ್ಮವೃತ್ತಿಯತ್ತ ಗಮನ ಹರಿಸಲು ಪ್ರಾರಂಭಿಸಿದ್ದಾರೆ.

ಹಿಂದೊಮ್ಮೆ ಆಕೆ ” ನನ್ನನ್ನು ಮತ್ತು ನಾಗ ಚೈತನ್ಯರನ್ನು ಒಂದೇ ಕೊಠಡಿಗೆ ಹಾಕಿದರೆ, ಆ ಕೋಣೆಯಲ್ಲಿ ಚೂಪಾದ ವಸ್ತುಗಳು ಇರದಂತೆ ನೋಡಿಕೊಳ್ಳಿ” ಎಂದು ಸಮಂತಾ ಈ ಹಿಂದೆ ನಾಗಚೈತನ್ಯ ಬಗ್ಗೆ ಕಾಮೆಂಟ್ ಮಾಡಿದ್ದರು. ಅಷ್ಟರ ಮಟ್ಟಿಗೆ ಆಕೆ ನಾಗಾಚೈತನ್ಯನಿಂದ ದು:ಖಿತಲಾಗಿದ್ದಾರೆ ಎನ್ನುವುದು ಸ್ಪಷ್ಟ.

“ಯಾರು ಯಾರೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬುದರ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ಯಾರೇ ಆದರೂ ಪ್ರೀತಿಯ ಮೌಲ್ಯವನ್ನು ತಿಳಿಯದವರು ಎಷ್ಟು ಜನರನ್ನು ಭೇಟಿಯಾದರೂ ಉಳಿಯುವುದು ಕೇವಲ ಕಣ್ಣೀರು. ಕನಿಷ್ಠ ಆ ಹುಡುಗಿಯಾದರೂ ಸಂತೋಷವಾಗಿರಬೇಕು. ಅವರು (Nagachaitanya) ತನ್ನ ನಡವಳಿಕೆಯನ್ನು ಬದಲಾಯಿಸಿಕೊಂಡು ಹುಡುಗಿಯನ್ನು ನೋಯಿಸದಂತೆ ನೋಡಿಕೊಂಡರೆ ಎಲ್ಲರಿಗೂ ಒಳ್ಳೆಯದು” ಎಂದು ಹೀಗೆ ಆಕೆ ಹೇಳಿರುವ ಮಾತು ಈಗ ಬೇರೆಯದೆ ಅರ್ಥ ಕೊಡುಟ್ಟಿದೆ. ನಾಗಚೈತನ್ಯನಿಗೆ ಬೇರೆ ಸಂಬಂಧ ಇರುವುದನ್ನು ಈ ಮೇಲಿನ ವಾಕ್ಯಗಳು ಸ್ಪಷ್ಟವಾಗಿ ಹೇಳುತ್ತಿವೆ ಎಂದಾಗಿ ಆಕೆಯ ಮಾತನ್ನು ಅರ್ಥೈಸಲಾಗುತ್ತಿದೆ. ಅದೇ ಈಗಿನ ಸೋಭಿತಾ ಧೂಳಿಪಾಲ ಇರಬಹುದು, ಅಥವಾ ಬೇರೆ ಯಾರೇ ಇರಬಹುದು. ಇನ್ನಷ್ಟು ದಿನಗಳಲ್ಲಿ ಮತ್ತಷ್ಟು ಸ್ಪಷ್ಟತೆ ಮೂಡುವುದರಲ್ಲಿ ಸಂಶಯವಿಲ್ಲ. ಅಲ್ಲಿಯ ತನಕ ನಾಗಾ ಮತ್ತು ಸಮಂತಾ ಅಭಿಮಾನಿಗಳಲ್ಲಿ ಗೊಂದಲ ಉಳಿಯುವುದು ಸಹಜ.

 

ಇದನ್ನೂ ಓದಿ: Couple Lip Kiss In Delhi Metro : ಮೆಟ್ರೋದಲ್ಲಿ ಎಲ್ಲರೆದುರೇ ಲಿಪ್ ಲಾಕ್ ಮಾಡಿದ ಜೋಡಿಯ ವೀಡಿಯೋ ವೈರಲ್!

Leave A Reply

Your email address will not be published.