SSLC ಪರೀಕ್ಷಾ ಕೇಂದ್ರಕ್ಕೆ ಹೆಜ್ಜೇನು ದಾಳಿ : ದಿಕ್ಕುಪಾಲಾಗಿ ಓಡಿ ಹೋದ ವಿದ್ಯಾರ್ಥಿಗಳು

Share the Article

ಇಂದು ಎಸ್ಸೆಸ್ಸೆಲ್ಸಿ ಪರೀಕ್ಷೆ. ಎಲ್ಲಾ ಕಡೆ ಪರೀಕ್ಷೆ ನಿರ್ವಿಘ್ನವಾಗಿ ನಡೆದರೆ ಇಲ್ಲೊಂದು ಕಡೆ ಮಾತ್ರ ಪರೀಕ್ಷಾ ಕೇಂದ್ರದಲ್ಲಿ ಹೆಜ್ಜೇನು ದಾಳಿ ಮಾಡಿದರ ಪರಿಣಾಮ ವಿದ್ಯಾರ್ಥಿಗಳು, ಪಾಲಕರು, ಪರೀಕ್ಷಾ ಮೇಲ್ವಿಚಾರಕರು ದಿಕ್ಕುಪಾಲಾಗಿ ಓಡಿ ಹೋದ ಘಟನೆಯೊಂದು ನಡೆದಿದೆ.

ಈ ಘಟನೆ ನಡೆದಿರೋದು ಶಿವಮೊಗ್ಗ ನಗರದ ಬಿ ಎಚ್ ರಸ್ತೆಯ ಮೇರಿ ಇಮ್ಯಾಕುಲೇಟ್ ಶಾಲೆಯಲ್ಲಿ ಸಂಭವಿಸಿದೆ.

ಇಂದು ( ಸೋಮವಾರ ) ಬೆಳಗ್ಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭಕ್ಕೂ ಮೊದಲು ಈ ಘಟನೆ ಸಂಭವಿಸಿದೆ. ಒಂದು ಕಡೆ ಪರೀಕ್ಷಾ ಕೇಂದ್ರಕ್ಕೆ ಮಕ್ಕಳನ್ನು ಕರೆತರುತ್ತಿದ್ದ ಪೋಷಕರು, ಅತ್ತ ಕಡೆ ಇನ್ನೇನು ಕೆಲವೇ ಕ್ಷಣದಲ್ಲಿ ಎಕ್ಸಾಂ ಆರಂಭಿಸುವ ಸಿದ್ಧತೆಯಲ್ಲಿ ಮೇಲ್ವಿಚಾರಕರು ತಮ್ಮ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದರು. ಈ ವೇಳೆ ಹೆಜ್ಜೆನ ದಾಳಿ ಮಾಡಿವೆ. ಈ ಸಮಯದಲ್ಲಿ ಪರೀಕ್ಷಾ ಕೇಂದ್ರಗಳಿಗೆ ಬಂದಿದ್ದವರು ದಿಕ್ಕಪಾಲಾಗಿ ಓಡಿದ್ದಾರೆ. ಇದರಿಂದಾಗಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಸ್ಥಳಕ್ಕೆ ಬಂದ ವೈದ್ಯರ ತಂಡ, ಹೆಜ್ಜೇನಿನಿಂದ ಕಡಿತಕ್ಕೊಳಗಾದ ಮಕ್ಕಳು ಮತ್ತು ಪರೀಕ್ಷಾ ಮೇಲ್ವಿಚಾರಕರಿಗೆ ಚಿಕಿತ್ಸೆ ನೀಡಿದರು. 6 ವಿದ್ಯಾರ್ಥಿಗಳು, 10ಕ್ಕೂ ಹೆಚ್ಚು ಪಾಲಕರಿಗೆ ಗಾಯವಾಗಿದೆ.

Leave A Reply