ಬಂಟ್ವಾಳ : ಶಾಲಾ ವಾಹನ ಡಿಕ್ಕಿಯಾಗಿ‌ ಮೆಸ್ಕಾಂ ಉದ್ಯೋಗಿ ಸಾವು!

Share the Article

ಬಂಟ್ವಾಳ : ಶಾಲಾ‌ಬಸ್ ಡಿಕ್ಕಿಯಾಗಿ ಮೆಸ್ಕಾಂ ಉದ್ಯೋಗಿಯೋರ್ವ ಮೃತಪಟ್ಟ ಘಟನೆ ನಿನ್ನೆ ( ಮಾ.4) ಕುದ್ರೋಳಿ ಎಂಬಲ್ಲಿ ನಡೆದಿದೆ. ಮೂಡಬಿದ್ರೆ ಮೂರುಮಾರ್ನಾಡು ನಿವಾಸಿ ಗಣೇಶ್ ಪೂಜಾರಿ ಮೃತಪಟ್ಟ ಯುವಕ.

ಮೆಸ್ಕಾಂನಲ್ಲಿ ಮೀಟರ್ ರೀಡಿಂಗ್ ಉದ್ಯೋಗಿಯಾಗಿದ್ದು, ಬಂಟ್ವಾಳದಲ್ಲಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಾಸು ಮನೆಗೆ ಹೋಗುವ ಸಂದರ್ಭದಲ್ಲಿ ಕುದ್ರೋಳಿ ಎಂಬಲ್ಲಿ ಎದುರಿನಿಂದ ಬಂದ ಶಾಲಾ ಬಸ್ ಬೈಕ್ ಗೆ ಡಿಕ್ಕಿಯಾಗಿದೆ.

ಗಣೇಶ್ ಅವರಿಗೆ ಗಂಭೀರ ಗಾಯವಾಗಿದ್ದು,‌ ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಈ ಬಗ್ಗೆ ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply