ಅಲ್ಪನಿಗೆ ಐಶ್ವರ್ಯ ಸಿಕ್ಕರೆ ವಿಮಾನದ ಮೆಟ್ಟಿಲಿಳಿಯಲು ಕೂಡ ಛತ್ರಿ ಬಿಚ್ಚುವನು | ನರೇಂದ್ರ ಮೋದಿಗೆ ಲೇವಡಿ ಮಾಡಿದ ಕರ್ನಾಟಕ ಪ್ರದೇಶ ಕಾಂಗ್ರೆಸ್

Share the Article

ಬೆಂಗಳೂರು: ಬಿಜೆಪಿ ವಿರುದ್ಧ ಮತ್ತೆ ಹಾರಿ ಬಿದ್ದಿದೆ ಕರ್ನಾಟಕದ ಪ್ರದೇಶ ಕಾಂಗ್ರೆಸ್. ಈಗ ಕರ್ನಾಟಕದ ಕಾಂಗ್ರೆಸ್ ತಡವಿ ಕೊಂಡದ್ದು ಪ್ರಧಾನಿ ನರೇಂದ್ರ ಮೋದಿ ಅವರನ್ನು.

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ ಮೋದಿ ಜೀ ತಮ್ಮ ಪಿ ಆರ್ ಏಜೆನ್ಸಿ ಹೇಳಿದ ಟಾಸ್ಕ್‌ನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ. ಅಲ್ಲಿ ಮಳೆಯಿಲ್ಲ, ಬಿಸಿಲಿಲ್ಲ, ಕೇವಲ 20 ಮೆಟ್ಟಿಲು ಇಳಿಯಲು ಕೂಡ ಛತ್ರಿ ಬಿಚ್ಚಿತ್ತಾರೆ! ನಮ್ಮ ಪ್ರಧಾನಿಗೆ ವಿದೇಶಿಯರೆದುರು ನಗೆಪಾಟಲಿಗೆ ಈಡಾಗುವುದು ಅಭ್ಯಾಸವಾಗಿಬಿಟ್ಟಿದೆ ” ಎಂದು ವ್ಯಂಗ್ಯವಾಡಿದೆ.

ಫೋಟೋ ಶೂಟ್ ಚೆನ್ನಾಗಿದೆ ನರೇಂದ್ರ ಮೋದಿ ಅವರೇ, ಆದರೆ ಲೈಟಿಂಗ್ ಕಳಪೆಯಾಗಿದೆ, ಟಾರ್ಚ್ ಬೆಳಕು ಬಳಸುವ ಬದಲು ನಿಮ್ಮ ಹೊಚ್ಚ ಹೊಸ 8,500 ಕೋಟಿ ಬೆಲೆಯ ವಿಮಾನದಲ್ಲಿ ಫೋಟೋಶೂಟ್‌ಗಾಗಿಯೇ ಪ್ರತ್ಯೇಕ ಲೈಟಿಂಗ್ ವ್ಯವಸ್ಥೆ ಮಾಡಿಸಿಕೊಳ್ಳಿ! ಅಂದಹಾಗೆ ಮಾರಲು ದೇಶದ ಇನ್ಯಾವ ಆಸ್ತಿಯ ಪಟ್ಟಿ ನೋಡುತ್ತಿದ್ದೀರಿ !? ಎಂದು ಲೇವಡಿ ಮಾಡಿದೆ.

Leave A Reply