Home ಬೆಂಗಳೂರು ನಂಬಿ ಬಂದ ಗೆಳೆಯನೇ ಮಾಡಿದ ಮೋಸ-ಲಾಡ್ಜ್ ನಲ್ಲಿ ಮಹಿಳೆಯ ಉಸಿರುಗಟ್ಟಿಸಿ ಕೊಲೆ!!

ನಂಬಿ ಬಂದ ಗೆಳೆಯನೇ ಮಾಡಿದ ಮೋಸ-ಲಾಡ್ಜ್ ನಲ್ಲಿ ಮಹಿಳೆಯ ಉಸಿರುಗಟ್ಟಿಸಿ ಕೊಲೆ!!

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು: ಹೊರ ರಾಜ್ಯದ ಮಹಿಳೆಯನ್ನು ಲಾಡ್ಜ್ ಗೆ ಕರೆತಂದು ಉಸಿರುಗಟ್ಟಿಸಿ ಕೊಲೆ ನಡೆಸಿದ ಗಂಭೀರ ಪ್ರಕರಣವೊಂದು ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಒಡಿಶಾ ಮೂಲದ ದೀಪ ಪದನ್(37)ಎಂದು ಗುರುತಿಸಲಾಗಿದ್ದು, ಕೃತ್ಯ ಎಸಗಿ ಪರಾರಿಯಾದ ಆಕೆಯ ಸ್ನೇಹಿತನಿಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಘಟನೆ ವಿವರ:ಮೃತ ಮಹಿಳೆ ತನ್ನ ಸ್ನೇಹಿತನನ್ನು ಭೇಟಿಯಾಗಲು ಬೆಂಗಳೂರಿಗೆ ಬಂದಿದ್ದು, ಆ ಬಳಿಕ ಸ್ನೇಹಿತನೊಂದಿಗೆ ಲಾಡ್ಜ್ ಗೆ ತೆರಳಿದ್ದರು. ಜೂನ್ 09 ರ ರಾತ್ರಿ ಇಬ್ಬರೂ ಲಾಡ್ಜ್ ನಲ್ಲಿ ರೂಮ್ ಪಡೆದಿದ್ದು ಅದೇ ರಾತ್ರಿ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಮೂಡಿದೆ ಎನ್ನಲಾಗಿದೆ.

ಆ ಬಳಿಕ ಆರೋಪಿ ಮಹಿಳೆಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ನಡೆಸಿ ಪರಾರಿಯಾಗಿದ್ದು, ಜೂನ್ 10ರ ಮುಂಜಾನೆ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಯ ಗುರುತು ಸಿ.ಸಿ ಟಿವಿಯಲ್ಲಿ ಸೆರೆಯಾಗಿದ್ದು, ಅದೇ ಆಧಾರದಲ್ಲಿ ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.