Home latest ಉಡುಪಿ : ಕಪಾಟಿನಲ್ಲಿ ಅಡಗಿ ಕೂತ “ನಾಗರಾಜ” | ಬಟ್ಟೆ ತೆಗೆಯಲು ಹೋದ ವ್ಯಕ್ತಿಗೆ ಕಚ್ಚಿ,...

ಉಡುಪಿ : ಕಪಾಟಿನಲ್ಲಿ ಅಡಗಿ ಕೂತ “ನಾಗರಾಜ” | ಬಟ್ಟೆ ತೆಗೆಯಲು ಹೋದ ವ್ಯಕ್ತಿಗೆ ಕಚ್ಚಿ, ವ್ಯಕ್ತಿ ಸಾವು

Hindu neighbor gifts plot of land

Hindu neighbour gifts land to Muslim journalist

ಉಡುಪಿ: ಕಪಾಟಿನಲ್ಲಿದ್ದ ಅಂಗಿ ತೆಗೆಯಲು ಹೋದಾಗ, ಕೈಗೆ ನಾಗರ ಹಾವೊಂದು ಕಚ್ಚಿ ವ್ಯಕ್ತಿಯೋರ್ವ ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ದುರಂತ ಘಟನೆ ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಿದಿಯೂರು ಗ್ರಾಮದ ಸುಧಾಕರ ಅಮೀನ್ (55) ಎಂಬಾತರೇ ಈ ಮೃತ ದುರ್ದೈವಿ.

ಜೂ.8 ರಂದು ಸಂಜೆ 4.45ಕ್ಕೆ ತನ್ನ ಮನೆಯ ಕೋಣೆಯಲ್ಲಿ ಕಪಾಟಿನ ಮೇಲೆ ಇದ್ದ ಅಂಗಿಯನ್ನು ತೆಗೆಯಲು ಹೋದಾಗ ಕಪಾಟಿನ ಮೇಲೆ ಇದ್ದ ನಾಗರಹಾವು ಒಮ್ಮೆಲೇ ಕಚ್ಚಿದೆ.

ಕೂಡಲೇ ಸುಧಾಕರ ಅಮೀನ್ ರವರನ್ನು ಉಡುಪಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಜೂ.13ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.