Homeದಕ್ಷಿಣ ಕನ್ನಡಪುತ್ತೂರು : ಕುಂಬ್ರದಲ್ಲಿ ಓಮ್ನಿ-ಬೈಕ್ ಡಿಕ್ಕಿ ,ಓರ್ವ ಸಾವು

ಪುತ್ತೂರು : ಕುಂಬ್ರದಲ್ಲಿ ಓಮ್ನಿ-ಬೈಕ್ ಡಿಕ್ಕಿ ,ಓರ್ವ ಸಾವು

Hindu neighbor gifts plot of land

Hindu neighbour gifts land to Muslim journalist

ಪುತ್ತೂರು: ಬೈಕ್ ಮತ್ತು ಮಾರುತಿ ಓಮ್ಮಿ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರರು ಗಾಯಗೊಂಡ ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಕುಂಬ್ರದಲ್ಲಿ ಜು.3 ರ ರಾತ್ರಿ ನಡೆದಿದ್ದು ತೀವ್ರ ಗಾಯಗೊಂಡಿದ್ದ ಬೈಕ್ ನಲ್ಲಿದ್ದ ಕುಂಬ್ರ ಪಂಜಿಗುಡ್ಡೆ ನಿವಾಸಿ ರಘುನಾಥ ಶೆಟ್ಟಿ ಎಂಬವರು ಮೃತಪಟ್ಟಿದ್ದಾರೆ.

ರಘುರಾಮ ಶೆಟ್ಟಿಯವರು ತನ್ನ ಮಗನನ್ನು ಬೆಂಗಳೂರು ಬಸ್ ಗೆ ಬಿಡಲು ಪುತ್ತೂರಿಗೆ ಮನೆಯಿಂದ ಬೈಕ್ ನಲ್ಲಿ ಬರುತ್ತಿದ್ದ ವೇಳೆ ವಿರುದ್ಧ ಡಿಕ್ಕಿನಿಂದ ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಶೀನಪ್ಪ ಎಂಬವರು ಚಲಾಯಿಸುತ್ತಿದ್ದ ಮಾರುತಿ ಓಮ್ಮಿಗೆ ನಡುವೆ ತಿಂಗಳಾಡಿ ರಸ್ತೆಯ ಕುಂಬ್ರ ಸಮೀಪ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ರಘುನಾಥ ಶೆಟ್ಟಿ ಮತ್ತು ಸಹ ಸವಾರ ಅವರ ಪುತ್ರ ಗಂಭೀರ ಗಾಯಗೊಂಡಿದ್ದರು. ಇದೇ ವೇಳೆ ಸ್ಥಳಿಯರಾದ ಚಿತ್ರ ನಟ ಸುಂದರ ರೈ ಮಂದಾರ ಅವರು ತಮ್ಮ ಸ್ನೇಹಿತರ ಜೊತೆ ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ದರೂ ದಾರಿ ಮಧ್ಯೆ ರಘುರಾಮ ಶೆಟ್ಟಿ ಅವರು ಮೃತಪಟ್ಟಿದ್ದಾರೆ. ರಘುರಾಮ ಶೆಟ್ಟಿಯವರ ಪುತ್ರನ ಕಾಲು ಮುರಿತಕ್ಕೊಳಗಾಗಿದ್ದು ಅವರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

Praveen Chennavara
Praveen Chennavara Palthady village & post Kadaba Taluq D.K.-For contact- 7090806456
RELATED ARTICLES

Most Popular

Recent Comments