Home ದಕ್ಷಿಣ ಕನ್ನಡ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಯುವಕರು ಹೊಯಿ ಕೈ – 6 ಮಂದಿ ವಿರುದ್ಧ ಶಾಂತಿ...

ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಯುವಕರು ಹೊಯಿ ಕೈ – 6 ಮಂದಿ ವಿರುದ್ಧ ಶಾಂತಿ ಭಂಗ ಪ್ರಕರಣ ದಾಖಲು

Hindu neighbor gifts plot of land

Hindu neighbour gifts land to Muslim journalist

ಪುತ್ತೂರು: ಪುತ್ತೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ
ಯುವಕರ ನಡುವೆ ಹೊಯಿ ಕೈ ನಡೆದ ಘಟನೆ ಡಿ.2ರಂದು
ಬೆಳಿಗ್ಗೆ ನಡೆದಿದ್ದು, ವಿಷಯ ತಿಳಿದು ಪೊಲೀಸರು ಬರುವಾಗ
ಗುಂಪು ಚದುರಿದ ಘಟನೆ ನಡೆದಿತ್ತು. ಆದರೆ ಪೊಲೀಸರು
ಹೊಯಿ ಕೈ ನಡೆಸುತ್ತಿದ್ದ 6 ಮಂದಿಯ ವಿರುದ್ಧ ಪ್ರಕರಣ
ದಾಖಲಿಸಿಕೊಂಡಿದ್ದಾರೆ.

ಪುತ್ತೂರು ನಗರ ಪೊಲೀಸ್ ಠಾಣೆಯ ವೆಂಕಟ್ರಮಣ ಅವರು ರೌಂಡ್‌ನಲ್ಲಿರುವಾಗ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಸುಮಾರು ಆರೇಳು ಮಂದಿ ಹೊಯಿ ಕೈ ನಡೆಸುತ್ತಿದ್ದು, ಶಾಂತಿ ಮತ್ತು ನೆಮ್ಮದಿಗೆ ಭಂಗವನ್ನುಂಟು ಮಾಡುತ್ತಿದ್ದರು. ತಕ್ಷಣ ಅವರು ಸ್ಥಳಕ್ಕೆ ತೆರಳಿ ಹೊಯಿ ಕೈ ನಡೆಸಿದ್ದಾರೆನ್ನಲಾದ ಎಂ. ಹ್ಯಾರೀಸ್, ಮೊಹಮ್ಮದ್ ಆದಿಲ್, ಇರ್ಫಾನ್, ಮೊಹಮ್ಮದ್ ಮುಸ್ತಾಫ, ಮೊಹಮ್ಮದ್ ಅಸ್ಪಾಕ್ ಮತ್ತು ನಿತೀಶ್ ಎಂಬವರ ವಿರುದ್ಧ ಕಲಂ 160 ಐಪಿಸಿಯಂತೆ ಪ್ರಕರಣ ದಾಖಲಿಸಿದ್ದಾರೆ.