Home » Dakshina Kannada: ಹಿಂದೂ ಸಂಘಟನೆ ಮುಖಂಡನ ಕುತ್ತಿಗೆಗೆ ಚಾಕು ಇರಿತ : ಸ್ನೇಹಿತನಿಂದಲೇ ದುಷ್ಕೃತ್ಯ : ಜೀವನ್ಮರಣ ಹೋರಾಟದಲ್ಲಿ ಹಿಂದೂ ಮುಖಂಡ

Dakshina Kannada: ಹಿಂದೂ ಸಂಘಟನೆ ಮುಖಂಡನ ಕುತ್ತಿಗೆಗೆ ಚಾಕು ಇರಿತ : ಸ್ನೇಹಿತನಿಂದಲೇ ದುಷ್ಕೃತ್ಯ : ಜೀವನ್ಮರಣ ಹೋರಾಟದಲ್ಲಿ ಹಿಂದೂ ಮುಖಂಡ

1 comment
Dakshina Kannada

Dakshina Kannada: ಹಿಂದೂ ಸಂಘಟನೆಯ ಮುಖಂಡನಿಗೆ ಸ್ವತಃ ಸ್ನೇಹಿತನೆ ಕುತ್ತಿಗೆಗೆ ಚಾಕು ಇರಿದಿರುವ ಘಟನೆ ಬಂಟ್ವಾಳದ ಜಕ್ರಿಬೆಟ್ಟು ಎಂಬಲ್ಲಿ ನಡೆದಿದೆ. ಆದರೆ ಇದುವರೆಗೂ ಚಾಕು ಇರಿತಕ್ಕೆ ಕಾರಣವೇನು ಎಂಬುದು ತಿಳಿದುಬಂದಿಲ್ಲ.

ಇದನ್ನೂ ಓದಿ: Rahul Gandhi: ಕಾಂಗ್ರೆಸ್’ಗೆ ರಾಹುಲ್ ಗಾಂಧಿ ರಾಜೀನಾಮೆ? ವೈರಲ್ ವಿಡಿಯೋ ಅಸಲತ್ತೇನು ?

ಹಲ್ಲೆಗೊಳಗಾದ ವ್ಯಕ್ತಿಯನ್ನು ಹಿಂದೂ ಸಂಘಟನೆಯ ಮುಖಂಡ ಹಾಗೂ ಉದ್ಯಮಿಯು ಆಗಿರುವ ಪುಷ್ಪರಾಜ್ ಎಂದು ತಿಳಿದು ಬಂದಿದೆ. ಸ್ನೇಹಿತರಿಬ್ಬರು ಜೊತೆಯಾಗಿ ಆಟೋದಲ್ಲಿ ತೆರಳುತ್ತಿದ್ದ ವೇಳೆ ಸ್ನೇಹಿತ ರವಿ ಎಂಬಾತ ಚೂರಿಯಿಂದ ಕುತ್ತಿಗೆಗೆ ಇರಿದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Jain Couple: ಸನ್ಯಾಸತ್ವ ದೀಕ್ಷೆ ಪಡೆಯಲು ಬರೋಬ್ಬರಿ 200 ಕೋಟಿ ರು. ದಾನ ಮಾಡಿದ ಜೈನ ದಂಪತಿಗಳು

banner

ಸದ್ಯ ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

You may also like

Leave a Comment