Home ದಕ್ಷಿಣ ಕನ್ನಡ ಅಲೆಕ್ಕಾಡಿ : ಬೈಕ್-ಓಮ್ನಿ ಡಿಕ್ಕಿ ,ಬೈಕ್ ಸವಾರನಿಗೆ ಗಾಯ

ಅಲೆಕ್ಕಾಡಿ : ಬೈಕ್-ಓಮ್ನಿ ಡಿಕ್ಕಿ ,ಬೈಕ್ ಸವಾರನಿಗೆ ಗಾಯ

Hindu neighbor gifts plot of land

Hindu neighbour gifts land to Muslim journalist

ಕಾಣಿಯೂರು : ಬೈಕ್ ಹಾಗೂ ಓಮ್ನಿ ಕಾರಿನ‌ ನಡುವೆ ಅಪಘಾತ ಸಂಭವಿಸಿ ಬೈಕ್ ಚಾಲಕ ಗಾಯಗೊಂಡ ಘಟನೆ ಮುರುಳ್ಯ ಗ್ರಾಮದ ಅಲೆಕ್ಕಾಡಿಯಿಂದ ವರದಿಯಾಗಿದೆ.

ಗಾಯಗೊಂಡ ಬೈಕ್ ಸವಾರನನ್ನು ಸೀತರಾಮ ಗೌಡ ಎಂದು ಗುರುತಿಸಲಾಗಿದೆ.

ಬೈಕ್ ಸವಾರ ಸೀತಾರಾಮ ಗೌಡ ಅವರು ಮೋಟಾರು ಕುದ್ಮಾರು ಕಡೆಯಿಂದ ಎಡಮಂಗಲ ಕಡೆಗೆ ಮಂಜೇಶ್ವರ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಹೋಗುತ್ತಿರುವಾಗ ಮುರುಳ್ಯ ಗ್ರಾಮದ ಅಲೆಕ್ಕಾಡಿ ಎಂಬಲ್ಲಿ ನಿಂತಿಕಲ್ಲು ಕಡೆಯಿಂದ ಕಾಣಿಯೂರು ಕಡೆಗೆ ಬರುತ್ತಿದ್ದ ಓಮ್ನಿ ಕಾರು ಡಿಕ್ಕಿಯಾಗಿದೆ.
ಪರಿಣಾಮ ಬೈಕ್ ಸಹಿತ ರಸ್ತೆಗೆ ಬಿದ್ದು ಬೈಕ್ ಸವಾರನಿಗೆ ಗಾಯವಾಗಿದೆ.ಸಹಸವಾರನಿಗೆ ತರಚಿದ ಗಾಯವಾಗಿದೆ.
ಗಾಯಾಳು ಸೀತಾರಾಮ ಗೌಡ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೈಕ್ ಸಹಸವಾರ ಕುದ್ಮಾರಿನ ರಫೀಕ್ ನೀಡಿದ ದೂರಿನಂತೆ ಓಮ್ನಿ ಚಾಲಕ ವಾಸಪ್ಪ ಗೌಡರ ವಿರುದ್ದ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.